ಕರ್ನಾಟಕ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಬದಲಾವಣೆ ವಿಚಾರ ಹಲವು ಆಯಾಮಗಳಲ್ಲಿ ತಿರುಗುತ್ತಿದೆ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ರಾಹುಲ್ ಗಾಂಧಿ, ತೀವ್ರ ಅಸಮಾಧಾನವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆ, ಆತ್ಮಸಾಕ್ಷಿಯ ಮಾತುಗಳನ್ನು ಒಂದು ಬಣದ ನಾಯಕರು ಆಡುತ್ತಿರುವುದು ಹೈಕಮಾಂಡ ಅನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಸಂಕಷ್ಟವನ್ನು ತಂದೊಡ್ಡುತ್ತಿದೆ. ರಾಜಧಾನಿಯಿಂದ ಇಂದು (ನ. 25) ದೆಹಲಿಗೆ ಹೊರಟಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಸಾಧ್ಯತೆಯಿದೆಯಾರಿಗೂ ಸಿಗದ ಅಪಾಯಿಟ್ಮೆಂಟ್, ವಿಧಾನ ಪರಿಷತ್ ಸದಸ್ಯ ಮತ್ತು ಖಾಯಂ CWC ಸದಸ್ಯರಾದ ಬಿಕೆ ಹರಿಪ್ರಸಾದ್ ಅವರಿಗೆ ಸಿಕ್ಕಿದೆ. ಸುಮಾರು ಇಪ್ಪತ್ತು ನಿಮಿಷಗಳ ಭೇಟಿಯಲ್ಲಿ, ಸಾಕಷ್ಟು ವಿಷಯಗಳೂ ಚರ್ಚೆಯಾಗಿವೆ ಎಂದು ಹೇಳಲಾಗುತ್ತಿದೆ. ಸದ್ಯದ ಕಾಂಗ್ರೆಸ್ ಬೆಳವಣಿಗೆಗಳಿಂದ, ರಾಹುಲ್ ಗಾಂಧಿ ಬೇಸರಿಸಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆಈ ನಡುವೆ, ಆತ್ಮಸಾಕ್ಷಿ ದಾಳವನ್ನು ಒಂದು ಬಣ ಉರುಳಿಸಿರುವುದು ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಬಿಸಿತುಪ್ಪದಂತಾಗಿದೆ. ಎರಡೂವರೆ ವರ್ಷಗಳ ಹಿಂದೆ ನಡೆದ ವಿದ್ಯಮಾನವನ್ನು ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ. ಆವೇಳೆ, ನಡೆದ ಮಾತುಕತೆಯ ಪ್ರಕಾರವೇ ನಡೆಯಲಿ ಎನ್ನುವ ವಾದ ಹೆಚ್ಚಾಗುತ್ತಿದೆ
ಕರ್ನಾಟಕ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಬದಲಾವಣೆ ವಿಚಾರ ಹಲವು ಆಯಾಮಗಳಲ್ಲಿ ತಿರುಗುತ್ತಿದೆ
ಕರ್ನಾಟಕ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಬದಲಾವಣೆ ವಿಚಾರ ಹಲವು ಆಯಾಮಗಳಲ್ಲಿ ತಿರುಗುತ್ತಿದೆ





