ಲಿಂಗಾಯತರು ಹಿಂದೂಗಳು ಅಲ್ಲ ಅಂತ ಹೇಳಲು ಜಾಮದಾರ್ ಒಬ್ಬ ಭಯೋತ್ಪಾದಕನೇ ಅಥವಾ ಆತಂಕವಾದಿಯೇ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಹಾರುದ್ರ ಕಂಬಾರ ಪತ್ರಿಕಾಗೋಷ್ಠಿಯಲ್ಲಿ ಪ್ರಷ್ಣೆ ಮಾಡಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತಿಚೆಗೆ ಹಿಂದುಳಿದ ಆಯೋಗದಿಂದ ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದಾರೆ ಅದಕ್ಕೇ ನಾವು ಸ್ವಾಗತಿಸುತ್ತೇವೆ. ಆದರೇ ಈ ಸಂದರ್ಭದಲ್ಲಿ ಜಾಮದಾರ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಈ ಮೇಲಿನ ರೀತಿ ಪತ್ರಿಕಾ ಹೇಳಿಕೆ ಕೊಟ್ಟು ಲಿಂಗಾಯತರಲ್ಲಿ ಆತಂಕ ಮತ್ತು ಭಯ ಹುಟ್ಟಿಸುತ್ತಿದ್ದಾರೆ. ನಮ್ಮ ದಾಖಲೆಗಳಲ್ಲಿ ಸಂವಿಧಾನ ಬದ್ಧವಾಗಿರುವ ಹಿಂದೂ ಧರ್ಮವೇ ಇರುತ್ತದೆ. ಗಾಣಿಗ, ಕಂಬಾರ, ಕುಂಬಾರ, ಹೂಗಾರ, ಅಗಳಿ ಇತ್ಯಾದಿ ಜಾತಿಗಳು ಸಂವಿಧಾನ ಬದ್ಧವಾಗಿ ದಾಖಲಾಗಿರುತ್ತವೆ. ಆದರೇ ಸಂವಿಧಾನದಲ್ಲಿ ದಾಖಲೆ ಇರದೇ ಇರುವ ಲಿಂಗಾಯತ ಧರ್ಮ ನಮೂದಿಸಿ ಎಂದು ಹೇಳಿ ಲಿಂಗಾಯತರನ್ನು ಸರ್ವನಾಶ ಮಾಡುವುದು ಇವರ ಹುನ್ನಾರವೇ? ಎಂಬುದನ್ನ ಸರ್ಕಾರ ಸ್ಪಷ್ಟ ಪಡಿಸಬೇಕು. ಎಂದು ಆಗ್ರಹಿಸಿದ್ದಾರೆ





