ಸೇಡಂ ಪಟ್ಟಣದ ಅಧ್ಯಾತ್ಮಿಕ ಪ್ರವಚನ ಇಂದಿನಿಂದ ಪ್ರಾರಂಭವಾಗುತ್ತದೆ ಎಂದು ಹಾಲಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಹೇಳಿದರು
ಸೇಡಂ ಪಟ್ಟಣದ ಹಾಲಪಯ್ಯ ವಿರಕ್ತ ಮಠದಲ್ಲಿ ಅಗಸ್ಟ್ 28 ರಿಂದ ಸೆಪ್ಟೆಂಬರ್ 7 ರವರೆಗೆ ಶ್ರಾವಣ ಮಾಸದ ನಿಮಿತ್ತ ಅಧ್ಯಾತ್ಮಿಕ ಪ್ರವಚನ ನಡೆಯಲಿದೆ ಎಂದು ಹಾಲಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸುದ್ದಿ ಮಾದ್ಯಮದವರೊಂದಿಗೆ ಮಾತನಾಡಿ ಪ್ರತಿನಿತ್ಯ ಸಾಯಂಕಾಲ 5 ಗಂಟೆಯಿಂದ 7-15 ನಿಮಿಷದವರೆಗೆ ಪ್ರವಚನ ನಡೆಯಲಿದೆ.ಕಲಾವಿದ ರತನ್ ಮಡಿವಾಳ ಸಂಗೀತ ಸೇವೆ ಸಲ್ಲಿಸಲಿದ್ದಾರೆ ನಿತ್ಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಸತ್ಕರಿಸಲಾಗುತ್ತದೆ.
ಭಕ್ತಿ ಭಜನೆ ನಡೆಯಲಿದೆ ಕಾರ್ಯಕ್ರಮಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ವೀರಶೈವ ಮಹಿಳಾ ಫೌಂಡೇಶನ್ ಅಕ್ಕನ ಬಳಗ ಸದ್ಬಕ್ತ ಮಂಡಳಿ ಸೇರಿದಂತೆ ಭಜನಾ ಮಂಡಳಿಗಳಯ ಸಹಕಾರ ನೀಡಲಿವೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ನಾಗಯ್ಯಸ್ವಾಮಿ ಬೊಮ್ನಳ್ಳಿ, ಶಿವಯ್ಯಸ್ವಾಮಿ ಬಿಬ್ಬಳ್ಳಿ,ಶಂಕ್ರಪ್ಪ ಮಾಸ್ತರ ಕೋಸಗಿ, ಜನಾರ್ದನ ತುಳೇರ್, ಶಿವಶರಣಪ್ಪ ಚಂದನಕೇರಿ ,ರವಿಕುಮಾರ ರಾಜಪೂರ ಉಪಸ್ಥಿತರಿದ್ದರು.