ಸುಪ್ರೀಂ ಕೋಟ್೯ ಒಳಮೀಸಲಾತಿ ಜಾರಿ ಮಾಡುವ ಆದೇಶ ರಾಜ್ಯ ಸರ್ಕಾರಗಳಿಗೆ ನೀಡಿ ತೀರ್ಪು ಹೊರಡಿಸಿರುವುದು ಮಾದಿಗ ಸಮುದಾಯಕ್ಕೆ ಸಂದಜಯವೆಂದು ಮಾದಿಗ ಸಮುದಾಯದ ಹಿರಿಯ ಹೋರಾಟಗಾರ ಮಾಪಣ್ಣಾ ಹದನೂರ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗಾಗಿ 1997ರಲ್ಲಿ ಮಾದಿಗ ದಂಡೋರಾ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಮಾದಿ್ ಸಮುದಾಯದ ಹೋರಾಟ ಮಾಡುತ್ತಲ್ಲೆ ಬಂದಿದೆ ಅದರ ಫಲವಾಗಿ ಇದೀಗ ಸುಪ್ರೀಂ ಕೋಟ್೯ ಏಳು ಸದಸ್ಯರ ಪೀಠ ಮಹತ್ವದ ತೀರ್ಪು ನೀಡಿದರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ್ ಮೇತ್ರಿ, ಚಂದ್ರಕಾಂತ ಸಗರಕರ್, ಮಲ್ಲಪ್ಪ ಚೀಗನೂರ್, ಶಿವರಾಜ್ ಜೀನಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು





