ಗ್ರಾಮ ಸ್ವರಾಜ್ಯಕ್ಕೆ ಸರ್ಕಾರ ಜನಪ್ರತಿನಿಧಿಗಳು ಹೆಚ್ಚು ಹೊತ್ತು ನೀಡಬೇಕು ಎಂದು ರೈತ ರಾಷ್ಟ್ರೀಯ ಮುಖಂಡರಾದ ದಶರಥ ಕುಮಾರ ರಾಜಸ್ಥಾನ ಅವರು ಒತ್ತಾಯಿಸಿದ್ದಾರೆ.
ಇಂದು ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮ ಸ್ವರಾಜ್ಯ ಉದ್ದೇಶವೇ ಗ್ರಾಮಗಳ ಸ್ವಯಂ ಆಡಳಿತ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಗ್ರಾಮದ ಅಭಿವೃಧ್ದಿಗೆ ಬೇಕಾದ ಕಾರ್ಯವನ್ನು ಗ್ರಾಮಸ್ಥರೇ ನಿರ್ಧಾರ ಕೈಗೊಳ್ಳುವ ಒಂದು ಆಡಳಿತ ವ್ಯವಸ್ಥೆ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಹೆಚ್ಚು ಮಹತ್ವ ನೀಡಿದವರು ಮಹಾತ್ಮ ಗಾಂಧೀಜಿ ಗ್ರಾಮಗಳ ಅಭಿವೃದ್ಧಿ ಭಾರತದ ಅಭಿವೃದ್ಧಿ ಇದು ಗಾಂಧೀಜಿ ಅವರ ನಂಬಿಕೆಯಾಗಿತ್ತು ಆದ್ದರಿಂದ ಅವರು ಅಧಿಕಾರ ವಿಕೇಂದ್ರಿಕರಣದ ಕಡೆಗೆ ಹೆಚ್ಚು ಹೊತ್ತು ಕೊಟ್ಟಿದ್ದರು ಸಾವಲಂಬಿ ಗ್ರಾಮದ ಪರಿಕಲ್ಪನೆ ಭಾರತದ ಸ್ವತಂತ್ರಕ್ಕೆ ಮುಂಚೆ ಸ್ಥಾಪಿತವಾದ ಗ್ರಾಮೀಣ ಪುನರ್ ನಿರ್ಮಾಣದ ಪರಿಕಲ್ಪನೆಯಾಗಿದ್ದು ಗಾಂಧೀಜಿ ಅವರ ಕನಸಾಗಿತ್ತು ಎಂದರು.





