ಭಾರತದಲ್ಲಿ ಮೋದಿ ಸರಕಾರದ ನೀತಿಗಳು ಕೇವಲ ಕಾರ್ಮಿಕರಿಗೆ ಅಲ್ಲ, ರೈತರು ಮತ್ತು ಇತರ ಶೋಷಿತ ವರ್ಗಗಳಿಗೆ ಮತ್ತು ದೇಶಕ್ಕೆ ಅತ್ಯಂತ ದಮನಕಾರಿ ಆಗಿದೆ ಎಂದು ಇಂದು ಎಂ.ಬಿ ಸಜ್ಜನ್ ಅವರು ಹೇಳಿದರು.
ಇಂದು ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿಕ್ಷಿತ ಯುವಜನರ ನಡುವೆ ನಿರುದ್ಯೋಗವು ಹಿಂದೆಂದು ಕಾಣದಷ್ಟು ಹೆಚ್ಚಿನ ಮುಟ್ಟಿದೆ. ಲಕ್ಷಾಂತರ ಸಣ್ಣ , ಮಾಧ್ಯಮ ಪ್ರಮಾಣದ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಕೋಟ್ಯಾಂತರ ಉದ್ಯೋಗ ನಷ್ಟವಾಗಿವೆ. ಕಾರ್ಮಿಕರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಉದ್ಯೋಗಗಳು ತೀವ್ರತರವಾಗಿ ಕುಷಿತ ಕಂಡಿವೆ. ಗುತ್ತಿಗೆ , ತಾತ್ಕಾಲಿಕ, ನಿಶ್ಚಿತ್ ಅವಧಿ , ಪಾರ್ಟ್ ಟೈಮ್ , ಗಿಗ್ ಕಾರ್ಮಿಕರು ಮತ್ತು ಇಂತಹದೇ ಕಾರ್ಮಿಕರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಇವರಿಗೆ ಯಾವುದೇ ಉದ್ಯೋಗದ ಭದ್ರತೆ, ಸಾಮಾಜಿಕ ಭದ್ರತೆ ಇರುವುದಿಲ್ಲ ಎಂದರು.





