ವಿಜಯಪುರ ಜಿಲ್ಲೆಯಾದ್ಯಂತ ನಾಲ್ಕು ದಿನ ಸತತ ಬೆನ್ನಬಿಡದೆ ಸುರಿತಿರುವ ಮಳೆಯಿಂದಾಗಿ ಬತ್ತಿ ಹೋಗಿದ್ದ ದೋಣಿ ನದಿಗೆ ಜೀವಕಳೆ ಬಂದಂತಾಗಿದೆ.
ತಡ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಳಿಕೋಟೆ ದೋಣಿ ನದಿ ಕೇಳ ಸೇತುವೆ ಸಂಪೂರ್ಣ ಜಲಾವೃತ್ತವಾಗಿದೆ. ವಾಹನ ಸವಾರರಿಗೆ ಕೆಲ ಕಾಲ ಪರದಾಡುವಂತಾಗಿದೆ.
ತಾಳಿಕೋಟೆ ರಾಜ್ಯ ಹೆದ್ದಾರಿ ಸೇತುವೆ ಬಿರುಕು ಬಿಟ್ಟ ಕಾರಣ ಹಳೆ ಸೇತುವೆ ಮೇಲೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದ ಸೇತುವೆ ಕಾಮಗಾರಿ ಮಳೆಗಾಲ ಬಂದ್ರೆ ಸಾಕು ಮತ್ತೆ ಜನರಲ್ಲಿ ಪ್ರಶ್ನೆ ಕಾಡುತ್ತದೆ ಮೇಲ್ ಸೇತುವೆ ದುರಸ್ತಿ ಯಾವಾಗ..ಅಂತ ಪಟ್ಟಣಕ್ಕೆ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಬಂದು ಹೋಗುವವರಿಗೆ ಸಂಕಷ್ಟ ಎದುರಾಗಿದೆ. ಈಗಲಾದರೂ ಜನ
ಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಾಜ್ಯ ಹೆದ್ದಾರಿ ಸೇತುವೆ ದುರಸ್ತಿಗೆ ಮುಂದಾಗುವರಾ? ಎಂದು ಕಾದು ನೋಡಬೇಕಿದೆ.





