Home Uncategorized ಕಾಳಗಿ ತಾಲೂಕಿನ ಹೊಡ್ದೆ ಬೀರನಹಳ್ಳಿ ರಸ್ತೆ ತಡೆದು ಗಡಿಕೇಶ್ವರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ

ಕಾಳಗಿ ತಾಲೂಕಿನ ಹೊಡ್ದೆ ಬೀರನಹಳ್ಳಿ ರಸ್ತೆ ತಡೆದು ಗಡಿಕೇಶ್ವರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ

0
ಕಾಳಗಿ ತಾಲೂಕಿನ  ಹೊಡ್ದೆ ಬೀರನಹಳ್ಳಿ ರಸ್ತೆ ತಡೆದು ಗಡಿಕೇಶ್ವರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ

ಕಾಳಗಿ ತಾಲೂಕಿನ ಹೊಡ್ದೆ ಬೀರನಹಳ್ಳಿ ರಸ್ತೆ ತಡೆದು ಗಡಿಕೇಶ್ವರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಗಡಿಕೇಶ್ವರ ಗ್ರಾಮದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು,ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಡಿ-ಗ್ರೇಡ್ ಮಾಡಿರುವ ಆದೇಶ ಹಿಂಪಡೆಯಬೇಕೆಂದು ಗಡಿಕೇಶ್ವರ ಸಮುದಾಯ ಕೇಂದ್ರ ಹೋರಾಟ ಸಮಿತಿ ವತಿಯಿಂದ ಹೊಡ್ಡೆ ಬೀರನಹಳ್ಳಿ ಕ್ರಾಸ್ ನ ಚಿಂಚೋಳಿ – ಕಲಬುರಗಿ ಮುಖ್ಯ ರಸ್ತೆ ತಡೆದು ಸರಕಾರದ ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಭಟನೆ ಮಾಡಿ ಕಾಳಗಿ ತಾಸಿಲ್ದಾರ್ರಾದ ಪೃಥ್ವಿರಾಜ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಮನವಿ ಪತ್ರ ಸ್ವೀಕರಿಸಲು ತಹಸಿಲ್ದಾರ್ ಬರದೇ ಇದ್ದ ಕಾರಣ, ಬರಲೇಬೇಕು ಎಂದು ಪಟ್ಟು ಹಿಡಿದ ಗ್ರಾಮಸ್ಥರು ಸುಮಾರು ಐದು ಗಂಟೆಗಳ ಕಾಲ ರಸ್ತೆ ತಡೆದು,ಪ್ರತಿಭಟನೆ ಮಾಡಿ.ಪ್ರತಿಭಟನಾಕಾರರು ನಡು ರಸ್ತೆಯಲ್ಲಿ ಕುಳಿತು ಊಟ ಮಾಡಿದರು. ನಂತರ ಆಗಮಿಸಿದ ತಹಸಿಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಆದಷ್ಟು ಬೇಗ ಸರಕಾರದ ಆದೇಶವನ್ನು ಪಡೆಯಬೇಕೆಂದು ಇಲ್ಲವಾದರೆ ಅಧಿಕಾರಿ ಕಚೇರಿ ಮುಂದೆ ಬರ್ತಿಭಟನೆ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಗಡಿಕೇಶ್ವರ. ಕುಪ್ಪನೂರ.ತೇಗಲತಿಪ್ಪಿ.ಹೊಡ್ಡೆ ಬೀರನಹಳ್ಳಿ. ಬೆನಕನಹಳ್ಳಿ.ಬಂಟನಹಳ್ಳಿ.ಚಿಂತಪಳ್ಳಿ.ರೈಕೋಡ. ಈ ಎಲ್ಲಾ ಗ್ರಾಮದ ಮುಖಂಡರು.ಗ್ರಾಮ ಪಂಚಾಯತ ಸದಸ್ಯರು.ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರಸಾದ್ ಹಳ್ಳಿ SSVTV ನ್ಯೂಸ್ ಕಾಳಗಿ

LEAVE A REPLY

Please enter your comment!
Please enter your name here

error: Content is protected !!