ಕಲಬುರಗಿ ನಗರದ ಏಷಿಯನ್ ಮಾಲ್ ಎದುರಿಗೆ ನೀರ್ಮಾಣ ಮಾಡುತ್ತಿರುವ ಕೆಬಿಎನ್ ಆಸ್ಪತ್ರೆಯ ಬೃಹತ್ ಕಟ್ಟಡವು ಅನಧೀಕೃತವಾಗಿ ಪರವಾನಿಗೆಯಿಲ್ಲದೇ ನಿರ್ಮಾಣ ಮಾಡುತ್ತಿದ್ದು ಮಹಾನಗರ ಪಾಲಿಕೆಗೆ ಇದರ ಎರಡು ಕೋಟಿ ರೂಪಾಯಿ ಪರವಾನಿಗೆ ಫೀಸ್ ಕಟ್ಟಿಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾದ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಂದೋಲಾ ಅವರು ಗಂಭೀರ ಆರೋಪ ಮಾಡಿದ್ದಾರೆ.





