ರಾಯಚೂರು ಜಿಲ್ಲಾ ಮಾನ್ವಿ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 5ರಂದು ನಡೆದ ಶಾಲಾ ಬಸ್ಸು ಹಾಗೂ KSRTC ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತ ರಾಜ್ಯದ ಶಾಲಾಡಳಿತ ಮಂಡಳಿಗಳಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ದೊಡ್ಡ ಆಘಾತ ಉಂಟು ಮಾಡಿದೆ. ಈ ರೀತಿಯ ಅವಘಡ ತಪ್ಪಿಸಿ ಮಕ್ಕಳು ಶಾಲೆಗಳಿಗೆ ಸುರಕ್ಷಿತವಾಗಿ ಸಂಚರಿಸಲು ಪೋಷಕರ ಆತಂಕ ನಿವಾರಿಸಲು ಶಾಲಾ ಆಡಳಿತ ಮಂಡಳಿ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪೋಷಕರ ಸಂಘಟನೆಗಳ ಸದಸ್ಯರೊಂದಿಗೆ ಸಭೆ ಮಾಡಲು ಖಾಸಗಿ ಶಾಲೆಗಳ ಇಂದು ಒಕ್ಕೂಟ ಆಗ್ರಹಿಸಿದೆ





