Google search engine
ಮನೆLocal Newsಸಡಗರದ ಕೋರವಾರ ಅಣಿವೀರಭದ್ರೇಶ್ವರ ಅದ್ದೂರಿ ರಥೋತ್ಸವ ಜರುಗಿತು

ಸಡಗರದ ಕೋರವಾರ ಅಣಿವೀರಭದ್ರೇಶ್ವರ ಅದ್ದೂರಿ ರಥೋತ್ಸವ ಜರುಗಿತು

ಸಡಗರದ ಕೋರವಾರ ಅಣಿವೀರಭದ್ರೇಶ್ವರ ಅದ್ದೂರಿ ರಥೋತ್ಸವ ಜರುಗಿತು

ಸಡಗರದ ಕೋರವಾರ ಅಣಿವೀರಭದ್ರೇಶ್ವರ ಅದ್ದೂರಿ ರಥೋತ್ಸವ ಜರುಗಿತು ಕಾಳಗಿ ತಾಲೂಕಿನ ಕೋರವಾರ ಗ್ರಾಮದ ಹೊರವಲಯದ ಅಣಿವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ತಡರಾತ್ರಿ ದೇವಸ್ಥಾನದ ಮೈದಾನದಲ್ಲಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು ಹಲಗಿ, ಡೊಳ್ಳು, ಬಾಜಾ-ಭಜಂತ್ರಿ, ವಾದ್ಯಮೇಳಗಳ ಝೇಂಕಾರ, ಪುರವಂತರ ಕುಣಿತ, ಮುಗಿಲು ಮುಟ್ಟುವ ಆಕಾಶಬಾಣಗಳ ಸಡಗರದ ನಡುವೆ ಭಕ್ತರು ತೇರು ಎಳೆದು ಸಂಭ್ರಮಿಸಿದರು. ನೆರೆದಿದ್ದ ರಾಜ್ಯ-ಹೊರ ರಾಜ್ಯಗಳ ಅಸಂಖ್ಯಾತ ಭಕ್ತರು ಫಲಪುಷ್ಪ, ನಾಣ್ಯ ತೇರಿನ ಮೇಲೆ ತೂರಿ ಜೈಕಾರ ಹಾಕಿ ಕೈಮುಗಿದು ನಮಿಸಿದರು ಇದಕ್ಕೂ ಮುಂಚೆ 3 ಕಿ.ಮೀ. ದೂರದ ಕೋರವಾರ ಗ್ರಾಮದ ಬಸಲಿಂಗಪ್ಪ ಮನೆತನದ ಕಲಶ, ತಳವಾರ ಮನೆಯ ಕುಂಭ ಮತ್ತು ನಂದಿಕೋಲಿನ ಭವ್ಯ ಮೆರವಣಿಗೆಯು ದೇವಸ್ಥಾನಕ್ಕೆ ಬಂದು ತಲುಪಿತು. ಗರ್ಭ ಗುಡಿಯೊಳಗಿನ ಅಣಿವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ಪಲ್ಲಕ್ಕಿ, ಮಿಣಿ, ಪುರವಂತರೊಂದಿಗೆ ಮೆರವಣಿಗೆಯು ದೇವಸ್ಥಾನಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿತು. ಬಳಿಕ ಮೈದಾನದಲ್ಲಿ ರಥಕ್ಕೆ ಪ್ರದಕ್ಷಿಣೆ ಹಾಕಿ ಕಲಶಾರೋಹಣ ಮಾಡಿ ತೇರು ಎಳೆಯಲಾಯಿತು. ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ ನೇತೃತ್ವದಲ್ಲಿ ಮಹಾಮಂಗಳಾರತಿ ಮಾಡಲಾಯಿತು. ಪ್ರಮುಖ ಭಕ್ತರು ಮತ್ತು ಜನಪ್ರತಿನಿಧಿಗಳು ಕಾಯಿ-ಕರ್ಪೂರ ಸಲ್ಲಿಸಿ ದರ್ಶನ ಪಡೆದರು. ಕಲಬುರಗಿ, ಕಾಳಗಿ, ಸೇಡಂ, ಶಾಹಾಬಾದ್, ಚಿತ್ತಾಪುರ, ಬೀದರ್, ವಿಜಯಪುರ, ಬಾಗಲಕೋಟೆ, ಸೊಲ್ಲಾಪುರ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.ಮುಂಜಾನೆ ಬೆಳಗಿನ ಜಾವ ಸುಮಾರು ಭಕ್ತರು ಹಸಿ ಮೈಯಿಂದ ಅಗ್ನಿ ತುಳಿದು ಹರಕೆ ಸಲ್ಲಿಸಿದರು.ಪಿಎಸ್ಐ ಗೌತಮ ನೇತೃತ್ವದ ಪೊಲೀಸ್ ತಂಡವು ಬಿಗಿ ಬಂದೋಬಸ್ತ್ ಕಲ್ಪಿಸಿತ್ತು.ಜಾತ್ರೆಯ ಕೊನೆಯ ದಿನ ಗುರುವಾರ ಬೆಳಿಗ್ಗೆ 8 ಗಂಟೆ ಮತ್ತು ಸಂಜೆ 4 ಗಂಟೆಗೆ ಪ್ರಸಿದ್ಧ ಜಂಗಿ ಪೈಲ್ವಾನರಿಂದ ಕುಸ್ತಿ ಪಂದ್ಯಗಳು ನಡೆಯಲಿವೆ. ಪ್ರಸಾದ್ ಹಳ್ಳಿ SSVTV ನ್ಯೂಸ್ ಕಾಳಗಿ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!