Google search engine
ಮನೆUncategorizedಅಭಿನವ ಡಾ.ಕುಮಾರ ಭೋಜರಾಜರ 30 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ 104 ಶಾಲಾ ಮಕ್ಕಳಿಗೆ...

ಅಭಿನವ ಡಾ.ಕುಮಾರ ಭೋಜರಾಜರ 30 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ 104 ಶಾಲಾ ಮಕ್ಕಳಿಗೆ ಉಚಿತ ಕ್ಷೌರ ಸೇವೆ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಸುಪುತ್ರರಾದ ಅಭಿನವ ಡಾ.ಕುಮಾರ ಭೋಜರಾಜರ 30 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ ಶ್ರೀ ಭೋಜಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ 104 ಶಾಲಾ ಮಕ್ಕಳಿಗೆ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಅನಾಥ ಆಶ್ರಮ , ನಿರ್ಗತಿಕರಿಗೆ ಕೇಂದ್ರ ಬುದ್ದಿ ಮಾದ್ಯರಿಗೆ. ಅಂಗವಿಕಲರಿಗೆ (ವಿಕಲಚೇತನರಿಗೆ) . ಮೂಕರಿಗೆ. ಕಿವುಡರಿಗೆ. ಅನಾಥ ಶಾಲಾ ಮಕ್ಕಳಿಗೆ, ಕಟ್ಟಡ ಕಾರ್ಮಿಕರಿಗೆ, ಬಸಸ್ಟ್ಯಾಂಡ್ ಹಾಗೂ ರೈಲ್ವೆ ನಿಲ್ದಾಣ ದಲ್ಲಿ ಇರುವ ಬುದ್ದಿ ಮಾಧ್ಯರಿಗೆ, ಹೀಗೆ ಹಲವಾರು ಕ್ಷೇತ್ರದಲ್ಲಿ ಒಟ್ಟು ಇಲ್ಲಿಯವರೆಗೆ ಒಟ್ಟು 16 ಕಡೆಯಲ್ಲೂ ಸೇರಿದಂತೆ 1770 ಅನಾಥ ಜನರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿದ್ದಾರೆ ಇವರು ನಿಸ್ವಾರ್ಥ ಸೇವೆಯಿಂದ ಈ ಸಮಾಜದ ಸೇವೆಯಲ್ಲಿ ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಬೇರೆಯವರಿಗೆ ಸಹಾಯ ಮಾಡುವ ಒಳ್ಳೆಯ ಮನಸ್ಸಗಳ ವ್ಯಕ್ತಿಗಳು ಸಿಕುವುದೇ ಕಡಿಮೆ ಆದರೆ ಕೆಲವು ತಾವು ಮಾಡುವ ಒಳ್ಳೆಯ ಕೆಲಸದಿಂದಲೆ ನಿಜ ಜೀವನದಲ್ಲಿ ಹೀರೊಗಳು ಆಗುತ್ತಾರೆಇದಕ್ಕೆ ನೈಜ ಉದಾಹರಣೆ ಎಂದರೆ ಈ ಹಡಪದ ಅಪ್ಪಣ್ಣ ಸಮಾಜದ ನಿಸ್ವಾರ್ಥ ಯುವಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಇವರು ಕ್ಷೌರಿಕ ವೃತ್ತಿಯಲ್ಲಿ ಯೇ ತಮ್ಮ ಕಾಯಕ ದಿಂದ ಸಾವಿರಾರು ಅನಾಥರಿಗೆ ಪ್ರೀಯಾಗಿ (ಉಚಿತವಾಗಿ) ಕ್ಷೌರ ಸೇವೆ ಸಲ್ಲಿಸಿ ಮಾನವೀಯತೆ ಮೆರೆದಿದ್ದಾರೆ ಈ ಸಂಧರ್ಭದಲ್ಲಿ – ರಾಜ್ಯ ಹಡಪದ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಸಿ ಹಳ್ಳಿ. ಸಿದ್ರಾಮರೆಡ್ಡಿ ಗೌಡ ಕುರಾಳ, ಶ್ರೀ ಭೋಜಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಿಕ್ಷಕರು ನಾಗೇಶ ಸರ ವಿಶ್ವಕರ್ಮ ಹಾಗೂ ಬಸವರಾಜ ಕುಂಭಾರ ಶಿಕ್ಷಕರು. ಮತ್ತು ಸಮಾಜದ ಬಂಧುಗಳು ಶರಣು ಹಡಪದ ಕೊಲ್ಲೂರು. ಸಂಗಮೇಶ ಹಡಪದ ಮಾರಡಗಿ,ಗಣೇಶ ಹಡಪದ ಶಹಾಬಾದ ಸೇರಿದಂತೆ ಈ ಉಚಿತ ಕ್ಷೌರ ಸೇವೆಯಲ್ಲಿ ಪಾಲ್ಗೊಂಡು ಸಮಾಜದ ಸೇವಕ- ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ಸಾಥ್ ನೀಡಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!