Home Uncategorized ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಪೂರ್ಣ

ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಪೂರ್ಣ

0
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಪೂರ್ಣ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಪೂರ್ಣ ನಿಜವಲ್ಲ ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲ ಎಂಬ ನ್ಯಾ. ನಾಗಮೋಹನದಾಸ್ ವಿಚಾರಣಾ ಆಯೋಗದ ಷರಾದೊಂದಿಗೆ ಈ ಪ್ರಕರಣ ತೆರೆಮರೆಗೆ ಸರಿದಿದೆ. ಈ ಆಯೋಗದ ಸುಮಾರು 20 ಸಾವಿರ ಪುಟಗಳ ವರದಿಯನ್ನು ಸರಕಾರ ಒಪ್ಪಿಕೊಂಡಿದೆ ಆದರೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಆಯೋಗ ಮಾಡಿದ್ದ ಪ್ರಮುಖ ಶಿಫಾರಸಿನಂತೆ ಕ್ರಮಕ್ಕೆ ಮುಂದಾಗದಿರುವುದು ಸಂಶಯಕ್ಕೆ ಆಸ್ಪದವೊದಗಿಸುವಂತಿದೆಜುಲೈ 2019 ರಿಂದ ಮಾರ್ಚ್ 2023ರ ನಡುವಿನ ಅವಧಿಯಲ್ಲಿನ (ಹಿಂದಿನ ಬಿಜೆಪಿ ಸರಕಾರದ ಅವಧಿ) ಪ್ರಮುಖ 5 ಇಲಾಖೆಗಳಲ್ಲಿನ ಸುಮಾರು 3 ಲಕ್ಷ ಕಾಮಗಾರಿಗಳ ಪೈಕಿ 1,729 ಕಾಮಗಾರಿಗಳ ಬಗ್ಗೆ ವಿಸ್ತೃತ ಪರಿಶೀಲನೆ ನಡೆಸಿದ್ದ ಆಯೋಗವು ‘ಅಭಿವೃದ್ಧಿ’ ಹಣವನ್ನು ಲೂಟಿ ಮಾಡಿದ ಆಪಾದನೆಯನ್ನು ಸಮರ್ಥಿಸಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪದ ಜತೆಗೆ ಕೆಲವು ಕಾಮಗಾರಿಗಳನ್ನು ನಿರ್ವಹಿಸಿರುವ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿತ್ತು 40 ಪರ್ಸೆಂಟ್ ಕಮಿಷನ್ಗೆ ಸಂಬಂಧಿಸಿದ ನೇರ ಆಪಾದನೆಗೆ ಸ್ಪಷ್ಟ ಸಾಕ್ಷ್ಯಾಧಾರ ಇಲ್ಲ ಎಂಬ ತೀರ್ಮಾನಕ್ಕೆ ವಿಚಾರಣಾ ಆಯೋಗ ಬಂದರೂ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಸಮರ್ಥನೆ ಮಾಡಿತ್ತು. ಅಂತೆಯೇ ಆಯೋಗದ ಶಿಫಾರಸಿನಂತೆ ಹೆಚ್ಚಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸುವ ತೀರ್ಮಾನವನ್ನು ಸರಕಾರ ಕೈಗೊಂಡಿತ್ತುಆದರೆ, ಸುಮಾರು ಮೂರು ವರ್ಷಗಳ ಹಿಂದೆ ಇಡೀ ದೇಶದ ಗಮನ ಸೆಳೆದಿದ್ದ ‘ಪೇ ಸಿಎಂ’ ಅಭಿಯಾನವು ರಾಜ್ಯದಲ್ಲಿ ತಾನು ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದನ್ನು ಮರೆತಂತೆ ಕಾಂಗ್ರೆಸ್ ಸರಕಾರ ವರ್ತಿಸುತ್ತಿದೆಕಳೆದ ಮಾರ್ಚ್ ತಿಂಗಳ 2ನೇ ವಾರದಲ್ಲಿ ನಾಗಮೋಹನ್ದಾಸ್ ಆಯೋಗ ಸರಕಾರಕ್ಕೆ ಸಲ್ಲಿಸಿದ್ದ ವರದಿಯ ಶಿಫಾರಸಿನಂತೆ ಸ್ಪಷ್ಟ ಮತ್ತು ನಿರ್ದಿಷ್ಟ ಕ್ರಮಗಳು ಆಗುತ್ತಿಲ್ಲ. ಈ ಮಧ್ಯೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಭ್ರಷ್ಟಾಚಾರದ ತನಿಖೆಯ ಜವಾಬ್ದಾರಿಯನ್ನೂ ನಿಭಾಯಿಸಿದ್ದ ಆಯೋಗದ ಅವಧಿ ವಿಸ್ತರಣೆ ಕೋರಿಕೆಯನ್ನು ಸರಕಾರ ತಳ್ಳಿಹಾಕಿದೆ. ಆಯೋಗವನ್ನು ಅವಧಿ ಮುಕ್ತಾಯಗೊಂಡಿದ್ದರಿಂದ ಕೆಲ ದಿನಗಳ ಹಿಂದೆ ಅಧಿಕೃತವಾಗಿ ಬರಖಾಸ್ತುಗೊಳಿಸಲಾಗಿದೆ. ಇದರೊಂದಿಗೆ 40 ಪರ್ಸೆಂಟ್ ಕಮಿಷನ್ ಆಪಾದನೆ ರಾಜಕೀಯ ಅಸ್ತ್ರವಾಗಿ ಮಾತ್ರ ಬಳಕೆಯಾಯಿತೇ ಎಂಬ ಪ್ರಶ್ನೆ ಸೃಷ್ಟಿಯಾಗಿದೆಹಿಂದಿನ ಬಿಜೆಪಿ ಸರಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘ ನೇರವಾಗಿ ಮಾಡಿದ್ದ ಕಮಿಷನ್ ದಂಧೆಯ ಆಪಾದನೆಯನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿತ್ತು. ಈ ವಿಚಾರವನ್ನು ಚುನಾವಣಾ ವಸ್ತುವಿಷಯವಾಗಿ ಬಳಸಿಕೊಂಡಿತ್ತು. ಅಧಿಕಾರಕ್ಕೆ ಬರುತ್ತಿದ್ದಂತೆ ಆರೋಪದ ಬಗ್ಗೆ ಸರಕಾರ ನ್ಯಾ.ನಾಗಮೋಹನದಾಸ್ ಆಯೋಗವನ್ನು ರಚಿಸಿತು. 40 ಪರ್ಸೆಂಟ್ ಕಮಿಷನ್ ಆರೋಪ ಪೂರ್ಣ ನಿಜವಲ್ಲ ಮತ್ತು ಆಪಾದನೆಗೆ ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲ ಎಂಬುದು ವರದಿಯ ಸಾರವಾಗಿತ್ತುಲೋಕೋಪಯೋಗಿ, ಸಣ್ಣ ಮತ್ತು ಬೃಹತ್ ನೀರಾವರಿ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ನಡೆದಿರುವ ಬೃಹತ್ ಕಾಮಗಾರಿಗಳಲ್ಲಿ ಶೇ.40 ಕ್ಕಿಂತ ಹೆಚ್ಚಿನ ಕಮಿಷನ್ ಚಾಲ್ತಿಯಲ್ಲಿದೆ ಎಂಬ ಗುತ್ತಿಗೆದಾರರ ಆರೋಪವನ್ನು ಆಯೋಗ ಪೂರ್ಣವಾಗಿ ಸಮರ್ಥನೆ ಮಾಡಲಿಲ್ಲ. ಆದರೆ, ಕೆಲವು ಕಾಮಗಾರಿಗಳಲ್ಲಿ ಅನುದಾನ ಮೀರಿ ಕಾಮಗಾರಿ ನೀಡಿರುವುದು, ನಿಗದಿತ ಅನುದಾನಕ್ಕಿಂತ ಹೆಚ್ಚು ಬಿಲ್ ಪಾವತಿಯನ್ನು ಆಯೋಗ ಪತ್ತೆ ಹಚ್ಚಿತ್ತು. ಟೆಂಡರ್ ತಪ್ಪಿಸಿ ಕಾಮಗಾರಿ ಗುತ್ತಿಗೆ ಮೂಲಕ ಕಮಿಷನ್, ಕಾಮಗಾರಿಗಳನ್ನೇ ನಡೆಸದೆ ಬಿಲ್ ಪಾವತಿಯಂತಹ ಸಂಶಯ ಆಯೋಗದ ವರದಿಯಲ್ಲೂ ವ್ಯಕ್ತವಾಗಿತ್ತುಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆ ಜವಾಬ್ದಾರಿಯನ್ನೂ ನಿರ್ವಹಿಸಿದ್ದ ನ್ಯಾ.ನಾಗಮೋಹನದಾಸ್ ಆಯೋಗವು ಕಳೆದ ಆಗಸ್ಟ್ 30 ರಂದು ಸರಕಾರಕ್ಕೆ 8,900 ಪುಟಗಳ ವರದಿ ಸಲ್ಲಿಸಿತ್ತು. ಒಟ್ಟು 761 ಕಾಮಗಾರಿಗಳನ್ನು ಪರಿಶೀಲಿಸಿದ್ದ ಆಯೋಗವು ನಿಯಮಾವಳಿ ಉಲ್ಲಂಘನೆ, ಸ್ವಜನಪಕ್ಷಪಾತ, ಭ್ರಷ್ಟಾಚಾರದಂತಹ ಹಲವು ಲೋಪಗಳನ್ನು ಪತ್ತೆ ಹಚ್ಚಿತ್ತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿತ್ತು. ಈ ವಿಚಾರದಲ್ಲೂ ಸರಕಾರ ಇನ್ನೂ ಮುಂದಡಿ ಇಟ್ಟಿಲ್ಲ

LEAVE A REPLY

Please enter your comment!
Please enter your name here

error: Content is protected !!