ಕಲಬುರಗಿ ಜಿಲ್ಲೆಯಲ್ಲಿ 2024-25ರಲ್ಲಿ ತೊಗರಿ ಬೆಳೆಗಳಿಗೆ ನೆಟೆ ರೋಗ, ಕಳಪೆ ಬೀಜ ಮತ್ತು ತೇವಾಂಶ ಕೊರತೆಯಿಂದ ಹಾಳಾಗಿರುವ ಬೆಳೆಗಳಿಗೆ ಬಾಕಿ ಇರುವ 326 ಕೋಟಿ ಪರಿಹಾರ, ಸ ವಿಮಾರಹಿತ ರೈತರಿಗೆ 307 ಕೋಟಿ ರೂಪಾಯಿಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ರೈತರ ಬೆಳಗಳಿಗೆ ಪ್ರತಿ ಎಕರೆಗೆ ರೂ:10,000/-ಮಧ್ಯಂತರ ಪರಿಹಾರ ನೀಡುಬೇಕು ಅಂತ ಜಿಲ್ಲಾ ರೈತ ಹೋರಾಟ ಸಮಿತಿ ಆಗ್ರಹಿಸಿದೆ
2024-25 -ಸಾಲಿನಲ್ಲಿ ಹಾನಿಯಾದ ಬೆಳೆಗಳಿಗೆ ಮಾರ್ಚ್ 2024-25 ರಂದು 667.73 ರೂಪಾಯಿ ಪರಿಹಾರ ಮಂಜೂರಾತಿಯಾಗಿದ್ದು, ಅದರಲ್ಲಿ ಈವರೆಗೂ ರೂ. 340.99 ಕೋಟಿ ರೂಪಾಯಿ ಮಾತ್ರ ವಿಮಾ ಹಣ ಬಿಡುಗಡೆ ಮಾಡಿ ಉಳಿದ ರೂ: 326,83 ಕೋಟಿ ರೂಪಾಯಿ ಪರಿಹಾರದ ಹಣದಲ್ಲಿ, ರೂ.291 ಕೋಟಿ ರೂಪಾಯಿ ಹಣವನ್ನು ಮಾತ್ರ ಮುಂದಿನ ವಾರದೊಳಗೆ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ.ಆದರೆ ಬಾಕಿ ಇರುವ ಎಲ್ಲಾ 326 ಕೋಟಿ ರೂಪಾಯಿ ವಿಮಾಹಣವನ್ನು ಸರ್ಕಾರ ಕೂಡಲೇ ಬಡ್ಡಿ ಸಮೇತ ಬಿಡುಗಡೆ ಮಾಡಬೇಕು, ಅದರಂತೆ ವಿಮಾರಹಿತ ರೈತರಿಗೆ ರೂ.307 ಕೋಟಿ ರೂಪಾಯಿ ಘೋಷಣೆ ಮಾಡುವಂತೆ ಮತ್ತು ಅದರಂತೆ ಈ ವರ್ಷದಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಗಳಿಗೆ ಪ್ರತಿ ಎಕರೆಗೆ ರೂ.10.000/- ಮಧ್ಯಂತರ ಪರಿಹಾರ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ ಸೆಪ್ಟೆಂಬರ್ ೧೭ ರ ವಳಗಾಗಿ ಬೇಡಿಕೆ ಈಡೇರದೆ ಇದ್ರೆ ಮುಖ್ಯಮಂತ್ರಿಗೆ ಬೈಕಾಟ್ ಮಾಡೀದಾಗಿ ಎಚ್ಷರಿಕೆ ನೀಡಿದ್ದಾರೆ





