ನಮ್ಮ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಹಬ್ಬಗಳನ್ನು ಹೆಚ್ಚಾಗಿ ಆಚರಿಸಬೇಕೆಂದು ಇದೇ ರೀತಿ ಪ್ರತಿ ವರ್ಷವೂ ಮುಂದುವರಿಸಿಕೊಂಡು ಹೋಗಬೇಕೆಂದು ನಟ ಯುವರಾಜ್ ಕುಮಾರ್ ಹೇಳಿದರು. ನಗರದ ನಾನ ಬಡಾವಣೆಗಳಲ್ಲಿ ಸ್ಥಾಪಿಸಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ನಗರದ ಎಂಜಿ ರಸ್ತೆಯಲ್ಲಿ ಚಾಲನೆ ನೀಡಿ ಮಾತನಾಡಿದವರು ಕೋಲಾರ ಜಿಲ್ಲೆಗೆ ಬಹಳಷ್ಟು ಇತಿಹಾಸವಿದ್ದು ಅದು ಎಲ್ಲರಿಗೂ ಅರ್ಥವಾಗಬೇಕು. ಕೋಲಾರಕ್ಕೆ ಆಗಮಿಸಿದ ಕೂಡಲೇ ಕೋಲಾರಮ್ಮ ತಾಯಿಯ ದರ್ಶನ ಪಡೆದುಕೊಂಡಿದ್ದೇನೆ ಎಂದರು.