ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರೊಂದಿಗೆ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ಇಂದು ಮಾತುಕತೆ ನಡೆಸಿದ್ದಾರೆ. ವಿಜಯಲಕ್ಷ್ಮೀ ಅವರು ವಾರದೊಳಗೆ 2ನೇ ಬಾರಿಗೆ ಪತಿಯನ್ನು ನೋಡಲು ಬಳ್ಳಾರಿ ಜೈಲಿಗೆ ಆಗಮಿಸಿದರು. ಈ ವೇಳೆ ವೇಳೆ ಜೈಲು ಅಧಿಕಾರಿಗಳು ಚಾಚೂ ತಪ್ಪದೆ ನಿಯಮಗಳನ್ನು ಪಾಲನೆ ಮಾಡಿದರು. ಸಂಜೆ 4. 30ರಿಂದ 5. 30ಕ್ಕೆ ಭೇಟಿಗೆ ಅವಕಾಶ ನೀಡಲಾಗಿತ್ತು. 20 ನಿಮಿಷ ಮುಂಚಿತವಾಗಿಯೇ ಬಂದು ವಿಸಿಟರ್ಸ್ ರೂಂ ನಲ್ಲಿ ವಿಜಯಲಕ್ಷ್ಮೀ ಅವರು ಕಾದು ಕುಳಿತಿದ್ದರು. ಬಳಿಕ ದರ್ಶನ್ ಭೇಟಿಯಾದರು