ಮಂಡಿಯೂರಿ ತಪ್ಪಾಗಿದೆ ಬಿಟ್ಟು ಬಿಡಿ ಎಂದರೂ ಕನಿಕರ ತೋರದೆ ಹಿಂಸೆ ಕೊಟ್ಟಿದ್ದಾರೆ. ಇದನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ಡಿ ಬಾಸ್ ಅಂಡ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ತಂದೆ ಶಿವನಗೌಡರು ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಮನಸ್ಸಿಗೆ ಬಹಳ ತ್ರಾಸಾಗುತ್ತಿದೆ. ನಮ್ಮ ಕರುಳು ಕಿತ್ತು ಬರುತ್ತದೆ. ಈ ದೃಶ್ಯ ನೋಡಿ ದುಖಃ ತಡಿಯಲಾಗುತ್ತಿಲ್ಲ. ಘನ ನ್ಯಾಯಾಲಯ. ಅರೋಪಿಗಳಿಗೆ, ಘೋರ ಶಿಕ್ಷೆ ಕೊಡಬೇಕೆಂದು ಮನವಿ ಮಾಡಿದರು.