ಸಿಎಂ ಕಾರ್ಯಕ್ರಮಕ್ಕೆಂದು ಹಾಸನದಿಂದ ಪತ್ರಕರ್ತರು ತೆರಳುತ್ತಿದ್ದ ವೇಳೆ ಬ್ರೇಕ್ ಪೇಲ್ಯೂರ್ ಆಗಿ ಚಲಿಸುತ್ತಿದ್ದ ಲಾರಿಗೆ ವಾಹನ ಡಿಕ್ಕಿಯಾಗಿ ಹತ್ತು ಜನ ಪತ್ರಕರ್ತರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಬಾಳ್ಳುಪೇಟೆ ಬಳಿ ಅಪಘಾತ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ವಾರ್ತಾ ಇಲಾಖೆ ವಾಹನ ಇಲ್ಲದೆ ಬೇರೆ ಇಲಾಖೆ ವಾಹನವನ್ನು ಸಿಎಂ ಸಿಎಂ ಕಾರ್ಯಕ್ರಮಕ್ಕೆ ಬಳಕೆ ಮಾಡಲಾಗಿತ್ತು. ಈ ವೇಳೆ ಯಾವ ಪ್ರಾಣ ಹಾನಿ ಸಂಭವಿಸಿರುವುದಿಲ್ಲ.