ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆ ಮಠದಲ್ಲಿ ಉತ್ತರಾಧಿಕಾರಿ ನೇಮಕ ಮಾಡಿಲ್ಲ ಹಾಗೂ ಟ್ರಸ್ಟ್ ಡೀಡ್ ತಿದ್ದಿದ್ದಾರೆಂಬ ಆರೋಪದ ಬೆನ್ನಲ್ಲೇ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನ ಬೆಂಬಲಿಸಿ ಬೃಹತ್ ಪಾದಯಾತ್ರೆ ನಡೆಸಲಾಯಿತು. ಭರಮಸಾಗರದ ವಿವಿಧ ಗ್ರಾಮಗಳಿಂದ ಸದ್ಭಕ್ತರು ಈ ಕಾಲ್ನಡಿಗೆ ಜಾಥದಲ್ಲಿ ಭಾಗವಹಿಸಿದ್ದರು. ಸಿರಿಗೆರೆ ಕ್ರಾಸ್ ನಿಂದ ಆರಂಭವಾಗಿ ಸಿರಿಗೆರೆ ತರಳಬಾಳು ಮಠದವರೆಗೂ ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆಯಲ್ಲಿ ನೂರಾರು ಮಠದ ಭಕ್ತರು ಭಾಗವಹಿಸಿದ್ದರು.
ಸಿರಿಗೆರೆ ಶ್ರೀಗಳಿಗೆ ನೈತಿಕ ಬೆಂಬಲ ನೀಡಿ ಕಾಲ್ನಡಿಗೆ ಜಾಥ
RELATED ARTICLES
Recent Comments
ಮೇಲೆ Hello world!





