ಗದಗ ಬೆಟಗೇರಿ ನಗರಸಭೆ ಕಚೇರಿಗೆ ನುಗ್ಗಿ ಎಇಇ ಮೇಲೆ ಗುತ್ತಿಗೆದಾರ ಹಲ್ಲೆ ಮಾಡಿದ್ದಾನೆ. ಗದಗ ನಗರದ ನಗರಸಭೆಯ ಎಇಇ ಹುಚ್ಚಪ್ಪ ಬಂಡಿವಡ್ಡರ್ ಮೇಲೆ ಗುತ್ತಿಗೆದಾರ ಪ್ರಕಾಶ್ ಕಲ್ಮನಿ ಅವರು ಹಲ್ಲೆ ಮಾಡಿದ್ದಾರೆ ಎಂದು ಅಧಿಕಾರಿ ಆರೋಪ ಮಾಡಿದ್ದಾರೆ. ಹೀಗಾಗಿ ನಮಗೆ ಸೂಕ್ತವಾದ ರಕ್ಷಣೆ ಬೇಕು ಎಂದು, ಜಿಲ್ಲಾಧಿಕಾರಿಗಳಿಗೆ ಸಿಬ್ಬಂದಿಗಳು ಮನವಿ ಸಲ್ಲಿಸಿದರು