ಹೈದ್ರಾಬಾದ ಕರ್ನಾಟಕ ಅಭಿವೃದ್ದಿಯ ಸರ್ಕಾರದ ಧೋರಣೆಯನ್ನು ಖಂಡಿಸಿ ಚಿಂಚೋಳಿಯಲ್ಲಿನ ದಿವಂಗತ ವೈಜನಾಥ ಪಾಟೀಲರವರ ಸಮಾಧಿಯಿಂದ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳ ಮಾರ್ಗವಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್’ವರೆಗೆ ಜ್ಯೋತಿ ಯಾತ್ರೆ ನಡೆಸುತ್ತಿದ್ದೇವೆ ಎಂದು ನಗರದಲ್ಲಿ ಸೈಬಣ್ಣಾ ಜಮಾದಾರ ತಿಳಿಸಿದ್ದಾರೆ.
ಚಿಂಚೋಳಿಯಿಂದ ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿಗೆ ಇಂದು ನಮ್ಮ ಜ್ಯೋತಿ ಯಾತ್ರೆಯು ತಲುಪಿದ್ದೂ ಮುಂದಿನ ದಿನಗಳಲ್ಲಿ ಹೈದ್ರಾಬಾದ್ ಕರ್ನಾಟಕದ ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ತಲುಪಿ ಬೆಂಗಳೂರಿನ ಪ್ರೀಡಂ ಪಾರ್ಕ್’ಗೆ ಈ ಜ್ಯೋತಿ ಯಾತ್ರೆಯು ಮುಕ್ತಾಯವಾಗಲಿದ್ದೂ, ಹೈದ್ರಾಬಾದ್ ಕರ್ನಾಟಕ ಪ್ರದೇಶವು ರಾಜ್ಯದಲ್ಲಿ ಅತೀ ಹಿಂದುಳಿದ ಪ್ರದೇಶವಾಗಿದ್ದು, ನಮ್ಮ ಭಾಗದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಾಗುಯ ಉದ್ಯೋಗಿಕವಾಗಿ ಅಭಿವೃದ್ದಿಯಾಗಲು ಈ ಜ್ಯೋತಿ ಯಾತ್ರೆಯು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ





