- ಯಾದಗಿರಿ
ಪಿಎಸ್ಐ ಪರಶುರಾಮ ಸಾವಿನ ಪ್ರಕರಣ ಸಿಐಡಿಯಿಂದ ಸಿಬಿಐ ಕೇಸ್ ವರ್ಗಾಯಿಸುವಂತೆ ಎಸ್ಸಿ ಎಸ್ಟಿ ನೌಕರರ ಸಂಘದ ವತಿಯಿಂದ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗಿದೆ.ಮೃತ ಪಿಎಸ್ಐ ಪರಶುರಾಮ್ ಚಲುವಾದಿ ಸಾವಿಗೆ ಸೂಕ್ತ ನ್ಯಾಯ ಸಿಗುವಂತೆ ಮೌನ ಪ್ರತಿಭಟನೆ ಮಾಡಲಾಯಿತು.ಪಿಎಸ್ಐ ಒಬ್ಬ ದಕ್ಷ ಅಧಿಕಾರಿಯ ಸಾವಿಗೆ ಕಾರಣರಾದ ಶಾಸಕ ಚೆನ್ನಾರಡ್ಡಿ ಪಾಟೀಲ್ ತೂನ್ನುರ್ ಹಾಗೂ ಪುತ್ರ ಪಂಪಣ್ಣಗೌಡನನ್ನ ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹ ಪಡಿಸಿದರು. ಇನ್ನೂ ಇದೇ ವೇಳೆ ಪ್ರತಿಭಟನ ನಿರತರು ಜಿಲ್ಲಾಧಿಕಾರಿ ಕಚೇರಿ ವರೆಗೂ ಬೃಹತ್ ಯಾರ್ಲಿ ನಡೆಸಿದ್ದರು.ಆದಷ್ಟು ಬೇಗ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸವಂತೆ ರಾಜ್ಯ ಪಾಲರಿಗೆ ಮತ್ತು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ





