Google search engine
ಮನೆUncategorizedಡಿಕೆಶಿ ಪರಪ್ಪನ ಅಗ್ರಹಾರಕ್ಕೆ ಶಾಸಕರ ಸಹಿ ಹಾಕಿಸಲು ಹೋಗಿದ್ದಾರೆ: ಆರ್ ಅಶೋಕ್ ಗಂಭೀರ ಆರೋಪ

ಡಿಕೆಶಿ ಪರಪ್ಪನ ಅಗ್ರಹಾರಕ್ಕೆ ಶಾಸಕರ ಸಹಿ ಹಾಕಿಸಲು ಹೋಗಿದ್ದಾರೆ: ಆರ್ ಅಶೋಕ್ ಗಂಭೀರ ಆರೋಪ

ಡಿಕೆಶಿ ಪರಪ್ಪನ ಅಗ್ರಹಾರಕ್ಕೆ ಶಾಸಕರ ಸಹಿ ಹಾಕಿಸಲು ಹೋಗಿದ್ದಾರೆ: ಆರ್ ಅಶೋಕ್ ಗಂಭೀರ ಆರೋಪ

ಡಿಕೆಶಿ ಪರಪ್ಪನ ಅಗ್ರಹಾರಕ್ಕೆ ಶಾಸಕರ ಸಹಿ ಹಾಕಿಸಲು ಹೋಗಿದ್ದಾರೆ: ಆರ್ ಅಶೋಕ್ ಗಂಭೀರ ಆರೋಪ ವಿಪಕ್ಷ ನಾಯಕ ಆರ್. ಅಶೋಕ್ ಅವರು ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿರುವ ಶಾಸಕರ ಸಹಿ ಪಡೆಯಲು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ರೈತರ ಆತ್ಮಹತ್ಯೆ ನಡೆಯುತ್ತಿದ್ದರೂ ಸರ್ಕಾರ ಮಜವಾದಿ ಸರ್ಕಾರ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಜನರು ಕಾಯುತ್ತಿದ್ದಾರೆ ಎಂದರು ಡಿಕೆ ಶಿವಕುಮಾರ್ ಅವರು ಪರಪ್ಪನ ಅಗ್ರಹಾರಕ್ಕೆ ಜೈಲಿನಲ್ಲಿ ಇರುವ ಇಬ್ಬರು ಶಾಸಕರ ಸಹಿ ಹಾಕಿಸಲೇ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆಶಿವಕುಮಾರ್ ಅವರು ಪರಪ್ಪನ ಆಗ್ರಹಾರದಲ್ಲಿ ಶಾಸಕರಾದ ವೀರೇಂದ್ರ ಪಪ್ಪಿ ಹಾಗೂ ವಿನಯ್ ಕುಲಕರ್ಣಿ ಅವರನ್ನು ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಿದರುಶಾಸಕರ ದೆಹಲಿ ಟೂರ್, ಸಿದ್ದರಾಮಯ್ಯ ಮನೆಯಲ್ಲಿ ಡಿನ್ನರ್, ಡಿಕೆಶಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಇಷ್ಟೇ ನಡೆಯುತ್ತಿದೆ. ರೈತರ ಆತ್ಮಹತ್ಯೆ ನಡೆಯುತ್ತಿದೆ. ಸಮಾಜವಾದಿ ಸರ್ಕಾರ ಅಲ್ಲ, ಇದು ಮಜವಾದಿ ಸರ್ಕಾರ ಹಾಗೂ ಜನರ ಪಾಲಿಗೆ ಸರ್ಕಾರ ಸತ್ತಿದೆ ಎಂದು ವಾಗ್ದಾಳಿ ನಡೆಸಿದರು ಡೀಲ್ ಆದ ಸಿದ್ದರಾಮಯ್ಯ ಡಲ್ ಡಿಕೆ ಶಿವಕುಮಾರ್ ಡೀಲ್ ಆದ ಬಳಿಕ ಸಿದ್ದರಾಮಯ್ಯ ಡಲ್ ಆಗಿದ್ದಾರೆ. ನಾನೇ ಐದು ವರ್ಷ ಸಿಎಂ ಎಂದವರು ಇದೀಗ ಪ್ಲೇಟ್ ಚೇಂಜ್ ಮಾಡಿದ್ದಾರೆ. ಕಾಲ ಹತ್ತಿರ ಬರುತ್ತದೆ ಎಂದು ಭವಿಷ್ಯ ನಡಿದರುಡಿಕೆ ಜೋತಿಷ್ಯ ನಂಬುತ್ತಾರೆ. ನಾಯಕತ್ವ ಬದಲಾವಣೆ ಆಗಲ್ಲ ಅಂದರೆ ಯಾಕೆ ಡಿಕೆ ಶಿವಕುಮಾರ್ ಜೈಲಿಗೆ ಹೋಗಬೇಕು, ದೆಹಲಿಗೆ ಹೋಗಬೇಕು ಹಾಗೂ ಖರ್ಗೆ ಅವರ ನಿವಾಸಕ್ಕೆ ಭೇಟಿ ಕೊಡಬೇಕು? ಎಂದು ಪ್ರಶ್ನಿಸಿದರು. ಖರ್ಗೆ ಹೆಸರಿಗಷ್ಟೇ ಅಧ್ಯಕ್ಷರು. ಆದರೆ ಅವರು ಪರಾವಲಂಬಿ ಎಂದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!