Google search engine
ಮನೆUncategorizedಲಕ್ಷ್ಮಿ ನಾಗರಾಜ್ ಹಾಗೂ ಇಂದು ನಾಗರಾಜ್ ರವರ ಭಕ್ತಿ ಗಾಯನ

ಲಕ್ಷ್ಮಿ ನಾಗರಾಜ್ ಹಾಗೂ ಇಂದು ನಾಗರಾಜ್ ರವರ ಭಕ್ತಿ ಗಾಯನ

ಲಕ್ಷ್ಮಿ ನಾಗರಾಜ್ ಹಾಗೂ ಇಂದು ನಾಗರಾಜ್ ರವರ ಭಕ್ತಿ ಗಾಯನ

ಮೈಸೂರು: ( ಕರ್ನಾಟಕ ಸರ್ಕಾರ):-ಮೈಸೂರಿನ ಸಹೊದರಿಯರಾದ ಲಕ್ಷ್ಮಿ ನಾಗರಾಜ್ ಹಾಗೂ ಇಂದು ನಾಗರಾಜ್ ರವರ ಭಕ್ತಿ ಗಾಯನ, ಮೈಸೂರು ಗುರುರಾಜ್ ರವರ ಜಾನಪದ ಗಾಯನಗಳ ಮೂಲಕ ಅಂಬಾವಿಲಾಸ ಅರಮನೆ ಆವರಣದಲ್ಲಿ 9 ದಿನಗಳ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ ತೆರೆಕಂಡಿತು ವಾತಾಪಿ ಗಣಪತಿಂ ..ಭಜೇ ಅಹಂ ಎಂಬ ಗಣಪತಿ ಸ್ತುತಿಯ ಮೂಲಕ ತಮ್ಮಗಾಯನ ಲಹರಿಹರಿಸಿದ ಮೈಸೂರು ಮೂಲದ ಖ್ಯಾತ ಸಿನಿಮಾಗಾಯಕರಾದ ಲಕ್ಷ್ಮಿ ನಾಗರಾಜ್ ಹಾಗೂ ಇಂದು ನಾಗರಾಜ್ ನೆರೆದಿದ್ದವರನದನು ತಲೆದೂಗುವಂತೆ ಮಾಡಿದರು. ಶ್ರೀ ಚಾಮುಂಡೇಶ್ವರಿ … ಅಮ್ಮಾ..ಪುರಂದರ ದಾಸರ ಬೃಂದಾವನದೊಳು ಆಡಿದವನ್ಯಾರೆ…. ಇಂದು ಭುವನೇಶ್ವರಿಯ ನೆನೆ ಮನವೆ….ಸಾದನೆ ಪರಮಪದ….. ಹಾಡುಗಳು ಕವಿಗೆ ಇಂಪುನ್ನು ನೀಡಿದವು. ಜಾನಪದ ಗಾನ ರಸದೌತಣ ಬಡಿಸಿದ ಮೈಸೂರು ಗುರುರಾಜ್: ಜಾನಪದ ಕಲಾವಿದ ಡಾ. ಮೈಸೂರು ಗುರುರಾಜ್ ಮತ್ತು ತಂಡದಿಂದ ಜಾನಪದ ಗಾಯನ ಅತ್ಯುದ್ಭತವಾಗಿ ಮೂಡಿಬಂದಿದ್ದು, ಶರಣು ಶರಣ್ಣವ್ಯಯ್ಯ… ಗಣನಾಯಕ….ಹಾಡಿನ ಮೂಲಕ ಜಾನಪದ ಸೊಗಡನ್ನು ಪಸರಿಸಲು ಶುರು ಮಾಡಿದರು. ಚಾಮುಂಡೇಶ್ವರಿ ಹಾಗೂ ನಂಜುಂಡೇಶ್ವರರ ಪ್ರೇಮ ಪ್ರಸಂಗ ಕುರಿತ ಮೂಲ ಜಾನಪದ ಗೀತೆ, ಮಾದಪ್ಪನ ಕುರಿತ ..ಬೆಟ್ಡ ನುಡಿದಾವೋ ಮಾದೇವ.. ಬಿದಿರು ನುಡಿದಾವೋ.. ಗಾಯನದ ಜೊತೆ ಕಂಸಾಳೆ ನೃತ್ಯಕ್ಕೆ ನೆರೆದಿದ್ದವರು ಉಘೇ ಎಂದರು. ತಿಂಗಳು ಮುಳುಗಿದವೋ.. ರಂಗೋಲಿ ಮೆರಗಿದವೋ.. ಮಂಟೇಸ್ವಾಮಿ ಕುರಿತ ಸಿದ್ದಯ್ಯ ಸ್ವಾಮಿ ಬನ್ನಿ…., ಸಾರಿ ಹೇಳುವೆ, ಕೇಳಿ ಶರಣರೆ ಕಲಿಗಾಲದ ಮಹಿಮೆಯನು….ಒಲಿದು ಬಾರೋನ್ನಯ್ಯ.. ಒಲಿದು ಬಾರೊ ಸಿದ್ದಯ್ಯ… ಹಾಡಿ ಭಕ್ತಿ ಭಾವದಲ್ಲಿ ಎಲ್ಲರನ್ನೂ ರಂಜಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ರವರ ಕೋರಿಕೆ ಮೇರೆಗೆ ಎಲ್ಲೋ ಜೋಗಪ್ಪ ನಿನ್ನ ಅರಮನೆ ಜಾನಪದ ಗೀತೆ ಹಾಡಿದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನ ಬೀದರ್ ಜಿಲ್ಲೆಯ ಜಾನಪದ ಕಲಾವಿದೆ ರೇಖಾ ಸವದಿ ಅವರು ಎಲ್ಲಿ ಕಾಣೇ ಎಲ್ಲಿ ಕಾಣೆನ ಎಲ್ಲಮ್ಮ.. ಹಾಗೂ ಇನ್ನಿತರ ಜನಾಪದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರೆ. ಜನಗರದ ಇಸ್ಕಾನ್ ದೇಗುಲದ ತಂಡದಿಂದ ಹರೇ ಕೃಷ್ಣ ಹರೇ ಕೃಷ್ಣ ಹರೇ ರಾಮ.. ಹರೇ ರಾಮ ..ಎಂದು ಹರಿನಾಮ ಸಂಕೀರ್ತನೆ ಮಾಡಿದ್ದು, ಸಭೀಕರು ಸರಳವಾಗಿ ನೃತ್ಯ ಮಾಡಿ ಭಕ್ತಿ-ಭಾವದಲ್ಲಿ ಮಿಂದೆದ್ದರು. ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರು ಹಾಗೂ ಬೀದರ್ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಅವರು ಮಾತನಾಡಿ, ಸಂಗೀತಕ್ಕೆ ಮಳೆತರುವ, ಕಾಯಿಲೆಗಳನ್ನು ವಾಸಿ ಮಾಡುವ ಹಾಗೂ ಒತ್ತಡ ನಿವಾರಿಸುವ ಅದ್ಭುತವಾದ ಶಕ್ತಿಯಿದೆ. ಹಾಗಾಗಿ ಕಲೆ, ಸಾಹಿತ್ಯ , ಸಂಗೀತ, ನೃತ್ಯ ವನ್ನು ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿ ಎಂದರು ಆನೆಗಳೊಂದಿಗೆ ಯಾರೂ ಸೆಲ್ಫಿ ಕ್ಲಿಕ್ಕಿಸುವುದು, ರೀಲ್ಸ್ ಮಾಡುವುದು ಮಾಡಬೇಡಿ, ವನ್ಯ ಜೀವಿಗಳೊಂದಿಗೆ ಸಹಬಾಳ್ವೆ ಮುಖ್ಯ ಎಂದು ಕಿವಿ ಮಾತು ಹೇಳಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!