ಇದೇ ತಿಂಗಳ 29 ಮತ್ತು 30 ಸೆಪ್ಟೆಂಬರ್ನಂದು ಕಲಬುರಗಿ ನಗರದ ಪಬ್ಲಿಕ್ ಗಾರ್ಡನ್’ನಲ್ಲಿರು ಹೋಟೆಲ್ ಯಾತ್ರಿ ನಿವಾಸದಲ್ಲಿ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ FRP ಬೆಲೆ, ಕಾಟದಲ್ಲಿ ಅನ್ಯಾಯ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಒತ್ತಾಯ ಹಾಗೂ ಚರ್ಚೆ ನಡೆಸಲಾಗುವುದು ಮತ್ತು ಸಮ್ಮೇಳನದಲ್ಲಿ ರವೀಂದ್ರ, ಎನ್ ಕೆ ಶುಕ್ಲಾ, ಎನ್ ಎಲ್ ಭರತ್ ರಾಜ್, ಜಿ ನಾಗರಾಜ್ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಒಟ್ಟು 62 ಜನ ಪ್ರಮುಖರು ಹಾಗೂ ನೂರಾರು ಕಬ್ಬು ಬೆಳೆಗಾರರು ಭಾಗವಹಿಸಲಿದ್ದಾರೆ ಎಂದು ರೈತ ಹೋರಾಟಗಾರ ಶರಣಬಸಪ್ಪಾ ಮಮಶೆಟ್ಟಿ ತಿಳಿಸಿದ್ದಾರೆ





