ಗಣೇಶೋತ್ಸವ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ಧಾರವಾಡ ಶಿವಾಜಿ ವೃತ್ತದ ಸಾರ್ವಜನಿಕ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಧಾರವಾಡ ನಗರದಾದ್ಯಂತ ಪಥಸಂಚಲನ ನಡೆಸಿದರು. ಭಾನುವಾರ ನಡೆದ ಆಕರ್ಷಕ ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿ ನಗರದಾದ್ಯಂತ ಸಂಚರಿಸಿದ್ದು, ದಾರಿಯುದ್ದಕ್ಕೂ ಜನರು ಪಥಸಂಚಲನವನ್ನು ಭಾರತ ಮಾತೆಗೆ ಜಯವಾಗಲಿ ಎಂದು ಜಯಘೋಷ ಹಾಕಿ ಸ್ವಾಗತಿಸಿದರು