ಫೋನ್ ಟ್ಯಾಪ್ ಮಾಡೋಕೆ ಎಚ್ಡಿ ಕುಮಾರಸ್ವಾಮಿ ಏನು ಟೆರೆರಿಸ್ಟ್ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಫೋನ್ ಕದ್ದಾಲಿಗೆ ಮಾಡುವಂತಹ ಮುಟ್ಟಾಳ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಎಂದಿಗೂ ಮಾಡುವುದಿಲ್ಲ ಎಂದು ಹೇಳಿದರು. ಇನ್ನೂ ಕುಮಾರಸ್ವಾಮಿಯವರ ಫೋನ್ ಟ್ಯಾಪ್ ಮಾಡುವುದಕ್ಕೆ ಅವರೇನು ಉಗ್ರವಾದಿಗಳೇ, ಅವರು ನಮ್ಮ ರಾಜ್ಯದ ನಾಯಕರು ಅವರ ಫೋನ್ ಟ್ಯಾಪ್ ಯಾಕೆ ಮಾಡುತ್ತಾರೆ ಎಂದು ಮರು ಪ್ರಶ್ನೆ ಹಾಕಿದರು.





