May 1 ರಂದು ಕಲಬುರಗಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ :
ಬಿ ಎಸ್ ಎನ್ ಎಲ್ ಕ್ಷೇಮಭಿವೃದ್ಧಿ ಟ್ರಸ್ಟ್ ಕಲಬುರಗಿ ವತಿಯಿಂದ ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಘೋಷ್ಟಿ ನಡೆದಿದ್ದು ಈ ಅಧ್ಯಕ್ಷರಾದ ಕಿಶೋರ್ ಗಾಯಕ್ವಾಡ್ ಮಾತನಾಡಿ ಮೇ 1ರಂದು ಕಲಬುರಗಿ ನಗರದ ಕೋಟನೂರಿನ BSNL ಲೇಔಟ್ ನಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ ಕಳೆದ 22 ವರ್ಷಗಳಿಂದ ಅಚೀರುಸುತ್ತಿದ್ದು ಈ ವರ್ಷವೂ ಕೂಡ ಇದೆ ಮೇ 01 ರಂದು ಬುದ್ಧ ಬಸವ ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವುದಾಗಿ ತಿಳಿಸಿದರು ಜೊತೆಗೆ ಜಯಂತ್ಯೋತ್ಸವದಲ್ಲಿ ಅನೇಕ ಸನ್ಮಾನ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು ಆ ನಿಟ್ಟಿನಲ್ಲಿ 40 ಜನ ಪೊಲೀಸ್ ಅಧಿಕಾರಿಗಳನ್ನ, ಹಾಗೂ 25 ಜನ ನಿವೃತ್ತ ಭಾರತೀಯ ಯೋಧರಿಗೆ, ಹಾಗೂ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಯ 23 ಜನ ಅಧ್ಯಕ್ಷರುಗಳಿಗೆ ಭೀಮ “ರತ್ನ ಪ್ರಶಸ್ತಿ ” ನೀಡಿ ಸನ್ಮಾನಿಸಲಾಗುತ್ತದೆ, ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಾಗೂ ಅತಿಥಿಗಳಾಗಿ Dr.H. T. ಸಾಂಗ್ಲಿಯಾನ ಆಗಮಿಸುತ್ತಿರುವುದಾಗಿ ತಿಳಿಸಿದರು ಇನ್ನು ಇದೆ ವೇಳೆ ಗೌರವ ಅಧ್ಯಕ್ಷರಾದ Dr. ಪಂಡಿತ್ ಕಾಂಬ್ಳೆ, ಹಾಗೂ ಮತ್ತಿತರರು ಪತ್ರಿಕಾ ಘೋಷ್ಟಿಯಲ್ಲಿ ಭಾಗಿಯಾಗಿದ್ದರು..





