ಕಲಬುರಗಿಯಲ್ಲಿ ಕಾರು-ಬೈಕ್ ಡಿಕ್ಕಿ: ಇಬ್ಬರು ಸವಾರರ ಸಜೀವ ದಹನ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮಹಾಗಾಂವ್ ಕ್ರಾಸ್ ಬಳಿ ಭೀಕರ ಅಪಘಾತ ಇಂದು ನಡೆದಿದೆ. ಹೈದರಾಬಾದ್ನಿಂದ ಕಲಬುರಗಿ ಕಡೆ ಬರುತ್ತಿದ್ದ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹೊತ್ತಿ ಉರಿದು, ಇಬ್ಬರು ಸವಾರರು ಸಜೀವ ದಹನಗೊಂಡಿದ್ದಾರೆ. ಸಿರಗಾಪುರ ಗ್ರಾಮದ ಆಕಾಶ ಧನವಂತ(19) ಮತ್ತು ಭೂಸಣಗಿ ಮೂಲದ ಸುಶೀಲ್(28) ಮೃತಪಟ್ಟಿದ್ದಾರೆ. ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ