ಯಾದಗಿರಿ ಜಿಲ್ಲೆಗೆ ಪ್ರಥಮ ಭಾರಿಗೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್ರವರಿಗೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ್ ಅವರು ಕಾರ್ಮಿಕರ ಜ್ವಲಂತ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದ್ದಾರೆ. ಅಖಿಲ ಭಾರತ ಕೋಲಿ ಸಮಾಜ ರಾಜ್ಯ ಘಟಕ, ಗಿರಿನಾಡು ಟ್ಯಾಕ್ಸಿ ಕಾರು ಚಾಲಕರ ಜಿಲ್ಲಾ ಘಟಕ ಯಾದಗಿರಿ, ಕರ್ನಾಟಕ ರಾಜ್ಯ ಚಾಲಕರ ಪರಿಷತ್ ಯಾದಗಿರಿ, ಯಾದಗಿರಿ ತಾಲ್ಲೂಕ ಗ್ಯಾರೇಜ್ ಮಾಲೀಕರ ಮತ್ತು ಮೆಕ್ಯಾನಿಕರ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಕಾರ್ಮಿಕರ ಜ್ವಲಂತ ಸಮಸ್ಯೆಗಳನ್ನು ಈಡೇರಿಸುವುದಕ್ಕಾಗಿ ಇಂದು ಜಿಲ್ಲೆಗೆ ಪ್ರ-ಪ್ರಥಮ ಬಾರಿಗೆ ಆಗಮಿಸುತ್ತಿರುವ ಕಾರ್ಮಿಕ ಸಚಿವರಿಗೆ ಪ್ರವಾಸಿ ಮಂದಿರ ಗಂಜ್ದಿಂದ ಸುಭಾಸ್ ಸರ್ಕಲ್ ವರೆಗೆ ಎಲ್ಲಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೈಕ್ ಲಘು ವಾಹನ, ಆಟೋಗಳ ಮುಖಾಂತರ ಬೃಹತ್ ರ್ಯಾಲಿ ಮೂಲಕ ಅದ್ಧೂರಿ ಸ್ವಾಗತ ಕೋರಿ ಮನವಿ ಸಲ್ಲಿಸಲಾಯಿತು