ಕುರುಬರು ಎಸ್.ಟಿಗೆ ಸೇರುವುದನ್ನು ವಿರೋಧಿಸಿದ ಉಗ್ರಪ್ಪನವರ ಹೇಳಿಕೆಗೆ ಗೊಂಡ ಕುರುಬ ಎಸ್.ಟಿ ಹೋರಾಟ ಸಮಿತಿ ಖಂಡಿಸಿ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಹಾಂತೇಶ ಕವಲಗಿ ತೀವೃ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಉಗ್ರಪ್ಪನವರು ತಮ್ಮ ಬಾಯಿ ಚಪಲ ಭಾಷಣದಲ್ಲಿ ಭಾವಾವೇಷವಾಗಿ ಕರ್ನಾಟಕದಲ್ಲಿರುವ ಕುರುಬರಿಗೆ ಎಸ್.ಟಿಗೆ ಸೇರಿಸಬಾರದೆಂದು ಹೇಳಿಕೆ ನೀಡಿದ್ದು, ಗೊಂಡ-ಕುರುಬ ಎಸ್.ಟಿ ಹೋರಾಟ ಸಮಿತಿ ಕಲಬುರಗಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ. ಮತ್ತು ಇದೇ ಸಂದರ್ಭದಲ್ಲಿ ಉಗ್ರಪ್ಪನವರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ರಾಮಯ್ಯ ಸಾಹೇಬರಿಗೆ, ಬ್ಲಾಕ್ಮೇಲ್ ಮಾಡುವಂತೆ, ಬೆದರಿಕೆ ಹಾಕುವಂತೆ ಎಚ್ಚರಿಕೆಯನ್ನು ನೀಡಿದ್ದು ಸಹ ಖಂಡನಾರ್ಹವಾಗಿದೆ ಮತ್ತು ಉಗ್ರಪ್ಪನವರು ಇಡೀ ಕುರುಬ ಸಮಾಜಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಅವರು ಹೇಳಿರುವ ಹೇಳಿಕೆಯನ್ನು ವಾಪಸ್ಸು ಪಡೆದು ಕುರುಬ ಸಮಾಜಕ್ಕೆ ಕ್ಷೇಮೆಯಾಚಿಸಬೇಕೆಂದು ಆಗ್ರಹಿಸಲಾಗಿದೆ
ಕುರುಬರು ಎಸ್.ಟಿಗೆ ಸೇರುವುದನ್ನು ವಿರೋಧಿಸಿದ ಉಗ್ರಪ್ಪನವರ ಹೇಳಿಕೆಗೆ ಗೊಂಡ ಕುರುಬ ಎಸ್.ಟಿ ಹೋರಾಟ ಸಮಿತಿ ಖಂಡನ
ಕುರುಬರು ಎಸ್.ಟಿಗೆ ಸೇರುವುದನ್ನು ವಿರೋಧಿಸಿದ ಉಗ್ರಪ್ಪನವರ ಹೇಳಿಕೆಗೆ ಗೊಂಡ ಕುರುಬ ಎಸ್.ಟಿ ಹೋರಾಟ ಸಮಿತಿ ಖಂಡನ





