Home Uncategorized ಕುಲಕಸಬುಗಳಿಂದ ಗುರುತಿಸಲ್ಪಡುವ ಕಂಬಾರರು ವಿಶ್ವಕರ್ಮ ಸಮುದಾಯದೊಳಗೆ ಬರುವ ವಂಚಮಸಾಲಿಗಳಾಗಿದ್ದಾರೆ

ಕುಲಕಸಬುಗಳಿಂದ ಗುರುತಿಸಲ್ಪಡುವ ಕಂಬಾರರು ವಿಶ್ವಕರ್ಮ ಸಮುದಾಯದೊಳಗೆ ಬರುವ ವಂಚಮಸಾಲಿಗಳಾಗಿದ್ದಾರೆ

0
ಕುಲಕಸಬುಗಳಿಂದ ಗುರುತಿಸಲ್ಪಡುವ ಕಂಬಾರರು ವಿಶ್ವಕರ್ಮ ಸಮುದಾಯದೊಳಗೆ ಬರುವ ವಂಚಮಸಾಲಿಗಳಾಗಿದ್ದಾರೆ

ಕುಲಕಸಬುಗಳಿಂದ ಗುರುತಿಸಲ್ಪಡುವ ಕಂಬಾರರು ವಿಶ್ವಕರ್ಮ ಸಮುದಾಯದೊಳಗೆ ಬರುವ ವಂಚಮಸಾಲಿಗಳಾಗಿದ್ದಾರೆ. ಆದರೆ ಇತ್ತೀಚಿಗೆ ಕಾಯಕದಿಂದ ಗುರುತಿಸಲ್ಪಡುವ ಕಂಬಾರರು ಕರ್ನಾಟಕ ಸರ್ಕಾರವು ಘೋಷಣೆ ಮಾಡಿರುವ ವಿಶ್ವಕರ್ಮ ಅಭಿವ್ರುದ್ಧಿ ನೀಗಮದಿಂದ ಸವಲತ್ತುಗಳು ನೀಡಬೇಕು ಎಂದು ಹೇಳಿದ್ದು. ನಿಗಮದಿಂದ ಯಾವುದೇ ಸವಲತ್ತುಗಳು ನೀಡಬಾರದು ಎಂದು ವಿಶ್ವಕರ್ಮ ಹೋರಾಟ ಸಮಿತಿಯ ಸಂಸ್ಥಾವಕ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಅವರು ಒತ್ತಾಯಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕುಲ ಕಸುಬುಗಳನ್ನು ಹೊಂದಿದವರಿಗೆ ಮಾತ್ರ ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಅವಕಾಶವಿದೆ. ವಂಚ ಕುಲ ಕಸುಬುಗಳನ್ನು ಇತರೆ ಸಮಾಜದವರು ಮಾಡಿದರೂ ಅವರಿಗೆ ನಿಗಮದ ಸೌಲಭ್ಯಗಳಿಗೆ ಅರ್ಹರಲ್ಲ ಎಂದು ಹೇಳಿಕೆ ನೀಡಲಾಗಿತ್ತು. ಆದರೆ ಕೆಲವರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೋರಾಟ ಮಾಡ ಮಾಡದೇ, ಸಂವಿಧಾನಾತ್ಮಕವಾಗಿ ನೀಡಿರವ ಹಕ್ಕುಗಳನ್ನು ಅರಿಯದೇ ತಮ್ಮನ್ನು ಹೀಯಾಳಿಸಲಾಗಿದೆ ಎಂದು ತಪ್ಪು ಕಲ್ಮನೆಯಲ್ಲಿ ಬಂದಿದ್ದಾರೆ ಆದರೆ ಲಿಂಗಾಯತ ಧರ್ಮವನ್ನು ಪಾಲಿಸುವ ಕಂಬಾರರು ತಮಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಬೇಕು ಎಂದು ಸರ್ಕಾರಕ್ಕೆ ಕೇಳಲಿ ಅದಕ್ಕೆ ನಾವು ಅಡ್ಡಿಯಿಲ್ಲ. ಆದರೆ ಹಿಂದಿನ ಬಾಗಿಲಿನಿಂದ ಬಂದು ವಿಶ್ವಕರ್ಮ ಸಮಾಜಕ್ಕೆ ನೀಡುವ ಅವಕಾಶಗಳನ್ನು ತಪ್ಪಿಸಲು ನಾವು ಬಿಡುವುದಿಲ್ಲ. ಅಂತಹವರನ್ನು ಖಂಡಿಸುತ್ತೇವೆ. ಕಾನೂನಿನ ಹೋರಾಟ ನಮ್ಮ ವಿಶ್ವಕರ್ಮ ಸಮಾಜದ ಧರ್ಮ ಗುರುಗಳಿಗೆ ಹಾಗೂ ಮುಖಂಡರಿಗೆ ಸರಿಯಾಗಿ ಗೊತ್ತಿದೆ. ಹಿಂದಿನ ಬಾಗಿಲು ಮುಖಾಂತರ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸವಲತ್ತು ಪಡೆಯಲು ಯತ್ನಿಸುವವರಿಗೆ ತಕ್ಕ ಉತ್ತರ ನೀಡಲು ಕೂಡ ಸಮಾಜ ರವಾಗಿದೆ ಎಂದು ಈ ಸುದ್ದಿ ಗೋಷ್ಠಿಯಲ್ಲಿ ಮೂಲಕ ಎಚ್ಚರಿಕೆ ನೀಡಲಾಗುತ್ತದೆ

LEAVE A REPLY

Please enter your comment!
Please enter your name here

error: Content is protected !!