ಮದ್ಯ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗದಿರಿ ಎಂದು ಅಬಕಾರಿ ನಿರೀಕ್ಷಕ ಓಂಪ್ರಕಾಶ ಮಠಪತಿ ಹೇಳಿದರು ಸೇಡಂ ವಿದ್ಯಾರ್ಥಿಗಳು ಮದ್ಯ ಮತ್ತು ಮಾದಕ ವಸ್ತುಗಳ ದುಷ್ಟಟಕ್ಕೆ ಒಳಗಾಗಿ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳಬಾರದೆಂದು ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕ ಓಂಪ್ರಕಾಶ ಮಠಪತಿ ಹೇಳಿದರು ತಾಲೂಕಿನ ಕೋಲಕುಂದಾ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಂಡ ಕನ್ನಡ ಜಾಗೃತಿ, ಮತ್ತು ಸಸಿ ನೆಡುವ ಕಾರ್ಯಕ್ರಮ ದಲ್ಲಿ ಮಾತನಾಡಿ ಸಾಮಾಜಿಕ ಪಿಡುಗಾಗಿರುವ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ವೈಯಕ್ತಿಕ ಜೀವನ ಆರೋಗ್ಯ ಹಾಗೂ ಕೌಟುಂಬಿಕ ಜೀವನವನ್ನು ಹಾಳು ಮಾಡುತ್ತದೆ ವಿದ್ಯಾರ್ಥಿ ಜೀವನದ ಹಂತದಲ್ಲಿಯೇ ಉತ್ತಮ ಹವ್ಯಾಸ ಹಾಗೂ ಒಳ್ಳೆಯ ಪರಿಸರವನ್ನು ಆಯ್ಕೆ ಮಾಡಿಕೊಳ್ಳಬೇಕೆಂದರು. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ ರೇಖಾ ಮೊಕದಮ್ ಮಾತನಾಡಿ ಪ್ರತಿಯೊಬ್ಬರಿಗೂ ಆರೋಗ್ಯವು ಬಹಳ ಮುಖ್ಯವಾಗಿದೆ ಆರೋಗ್ಯ ಹದಗೆಟ್ಟಾಗ ಅಥವಾ ಅನಾರೋಗ್ಯ ಉಂಟಾದಾಗ ಮಾತ್ರ ನಾವು ಅದನ್ನು ನೆನಪಿಸಿಕೊಳ್ಳುವ ಮಟಕ್ಕೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ ನಮ್ಮ ನಿಜವಾದ ಸಂಪತ್ತು ಯೋಗಕ್ಷೇಮ ಎಂದು ನಾವು ಅರಿತುಕೊಳ್ಳಬೇಕು ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಅಗತ್ಯವಿದೆ ಪ್ರತಿಯೊಬ್ಬರೂ ಸ್ವಚ್ಚತೆಗೆ ಅದ್ಯತೆ ಕೊಡಬೇಕು ಹಾಗೂ ದುಷ್ಟಟಗಳಿಂದ ದೂರವಿರಬೇಕು ಇದರಿಂದ ಉತ್ತಮ ಆರೋಗ್ಯ ಹೊಂದಲು ಸಾದ್ಯ ಎಂದರು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವರದಸ್ವಾಮಿ ಹಿರೇಮಠ, ಶಾಲೆಯ ಮುಖ್ಯ ಗುರು ಅಶೋಕರೆಡ್ಡಿ ಚಿಲುಮೆ,ನಂದಾದೀಪ ಸೇವಾ ಸಂಸ್ಥೆಯ ಅದ್ಯಕ್ಷ ಪತ್ರಕರ್ತ ಸಿದ್ದಯ್ಯಸ್ವಾಮಿ ಆಡಕಿ, ಸಂಘಟನೆಯ ತಾಲೂಕಾ ಅದ್ಯಕ್ಷ ಅಶೋಕ ಮಡಿವಾಳ,ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸವಿತಾ ರಾಠೋಡ,ಇದ್ದರು. ಶರಣಪ್ಪ ಎಳ್ಳಿ ssvtv news ಸೇಡಂ
ಮದ್ಯ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗದಿರಿ ಎಂದು ಅಬಕಾರಿ ನಿರೀಕ್ಷಕ ಓಂಪ್ರಕಾಶ ಮಠಪತಿ ಹೇಳಿದರು
ಮದ್ಯ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗದಿರಿ ಎಂದು ಅಬಕಾರಿ ನಿರೀಕ್ಷಕ ಓಂಪ್ರಕಾಶ ಮಠಪತಿ ಹೇಳಿದರು





