ನಿವೃತ್ತ ಶಿಕ್ಷಕಿ ಮಂಜುಳಮ್ಮ ವೃದ್ಧಾಶ್ರಮ ಸ್ಥಾಪಿಸಿ ಅನೇಕ ಹಿರಿಯ ಜೀವಗಳಿಗೆ ನೆರಳಾಗಿದ್ದಾರೆ ಇಂತಹ ಮಹನೀಯರು ಇನ್ನಷ್ಟು ಉತ್ತಮ ಸೇವೆ ಮಾಡಲು ಭಗವಂತನ ಪ್ರೇರಣೆಯಾಗಲಿ ಎಂದು ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಜೆ. ತಿಪ್ಪೇಸ್ವಾಮಿ ಹೇಳಿದರು. ನಗರದ ಬನಶ್ರೀ ವೃದ್ಧಾಶ್ರಮದಲ್ಲಿ ವೃದ್ದರೊಂದಿಗೆ ಸರಳವಾಗಿ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಜನ್ಮದಿನ ಕಾರ್ಯಕ್ರಮಗಳಿಂದ ಮಾನವನ ಸಂಬಂಧಗಳನ್ನು ಬೆಸೆಯುವಂತಗುತ್ತದೆ ಎಂದರು.