ಧಾರವಾಡ ನಗರದ ವಿವಿಐಪಿ ಸರ್ಕ್ಯೂಟ್ ಹೌಸ್ ನಲ್ಲಿ ಜನರ ಸಮಸ್ಯೆಗಳನ್ನು ಸಚಿವ ಸಂತೋಷ ಲಾಡ್ ಆಲಿಸಿದರು. ಅದರಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಕರೆ ಮಾಡಿ, ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡು ಕೂಡಲೇ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ಸಹ ನೀಡಿದರು. ಜನರಿಗೆ ಸಮಸ್ಯೆ ನಿವಾರಣೆಗೆ ಏನು ಪ್ರಯತ್ನ ಮಾಡಬೇಕು. ಅದನ್ನು ಕಾನೂನು ಅನ್ವಯ ಮಾಡಲಾಗುವುದು ಎಂದು ಧೈರ್ಯ ತುಂಬಿದರು