Home Uncategorized ಇಲಕಲ್ ನಲ್ಲಿ ಗುರುಭವನ ನಿರ್ಮಾಣಕ್ಕೆ ಬದ್ಧ: ಶಾಸಕ ಕಾಶಪ್ಪನವರ

ಇಲಕಲ್ ನಲ್ಲಿ ಗುರುಭವನ ನಿರ್ಮಾಣಕ್ಕೆ ಬದ್ಧ: ಶಾಸಕ ಕಾಶಪ್ಪನವರ

0

ಇಲಕಲ್ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ಶಿಕ್ಷಕರ ದಿನಾಚರಣೆ ನಡೆಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಅನುಕೂಲಕ್ಕಾಗಿ ಮುಂದಿನ ವರ್ಷದೊಳಗಾಗಿ ನಗರದಲ್ಲಿ ಗುರುಭವನ ನಿರ್ಮಿಸಿ ಕೊಡಲಾಗುವುದೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ನಮ್ಮ ತಂದೆ ಮಾಜಿ ಸಚಿವ ಎಸ್‌. ಆ‌ರ್. ಕಾಶಪ್ಪನವರ ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಅತಿ ಕಾಳಜಿ ಹೊಂದಿದ್ದರು. ನನ್ನನ್ನು ಒಬ್ಬ ಶ ‘ಕ್ಷಣವಂತನಾಗಿ ಮಾಡುವ ಹಿನ್ನೆಲೆಯಲ್ಲಿ ಪ್ರಹ್ಲಾದ ರಾಯಚೂರ ಎಂಬ ಶಿಕ್ಷಕರ ಪಾತ್ರ ಅತ್ಯಂತ ದೊಡ್ಡದು ಎಂದು ನೆನಪಿಸಿಕೊಂಡರು

LEAVE A REPLY

Please enter your comment!
Please enter your name here

error: Content is protected !!