ಕಲ್ಯಾಣ ಕರ್ನಾಟಕದ ಬಂಜಾರಾ ಯುವಜನರಿಗಾಗಿ ರಾಜ್ಯಮಟ್ಟದ ಉದ್ಯಮಶೀಲತೆ ಮತ್ತು ನಾಯಕತ್ವ ತರಬೇತಿ ಕಾರ್ಯಾಗಾರವನ್ನ ಕಲಬುರಗಿಯಲ್ಲಿ ಆಯೋಜಿಸಲಾಗಿದೆ ಇದರ ಸದುಪಯೋಗವನ್ನ ಬಂಜಾರಾ ಯುವಕರು ಪಡೆದುಕೊಳ್ಳಲು ಕರೆ ನೀಡಲಾಗಿದೆ
ಬಂಜಾರಾ ಸರ್ಕಾರಿ ಹಾಗು ಅರೆಸರ್ಕಾರಿ ನೌಕರರ ಸಹಿಯೋಗದಲ್ಲಿ ಕಲಬುರಗಿ ನಗರದಲ್ಲಿ ಇದೆ ಆಗಸ್ಟ್ ೨೪ ರಂದು ಸುವರ್ಣಾ ಸಭಾ ಕನ್ನಡ ಭವನದಲ್ಲಿ ಬಂಜಾರಾ ಯುವಕರಿಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಇದೊಂದು ರಾಜ್ಯಮಟ್ಟದ ಉದ್ಯಮಶೀಲತೆ ಹಾಗು ನಾಯಕತ್ವದ ತರಬೇತಿ ಕಾರ್ಯಾಗಾರವಾಗಿದ್ದು ಅಲ್ಲಿ ಮೊದಲು ನೊಂದಾಯಿತ ೨೦೦ ಜನ ಯುವಕರಿಗೆ ಮಾತ್ರ ಅವಕಾಶವಿದೆ ಪ್ರವೇಶ ಉಚಿತವಾಗಿದ್ದು ಊಟ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ರಾಜ್ಯ ಮಟ್ಟದ ಅಧಿಕಾರಿಗಳು ,ಯಶಸ್ವಿ ಉದ್ಯಮಿಗಳು , ಹೆಸರಾಂತ ವಿಷಯ ತಜ್ಞರಿಂದ ತರಬೇತಿ ನೀಡಲಾಗುವದು ಹಾಗಾಗಿ ಬಂಜಾರಾ ಸಮುದಾಯ್ ಯುವಕರು ಭಾಗವಹಿಸಿ ಲಾಭ ಪಡೆಯಲು ಅಧ್ಯಕ್ಷ ಸುನೀಲ್ ಕುಮಾರ್ ಕರೆ ನೀಡಿದ್ದಾರೆ





