ಕಾಂಗ್ರೇಸ್ ನಾಯಕರು ಕುರುಬ ಸಮಾಜದವರಿಗೆ ಮಿಸ್ ಗೈಡ್ ಮಾಡಿ ಪೊಲಿಟಿಕಲಿ ಗೇಮ್ ತೆಗೆದುಕೊಳ್ಳುವ ಸಲುವಾಗಿ ಕುರುಬ ಸಮಾಜದ ಮುಖಂಡರಿಗೆ ಎತ್ತುಕಟ್ಟಿ ಪ್ರತಿಭಟನೆಗೆ ಇಳಿಸುತ್ತಿದ್ದಾರೆ ಎಂದು ನಗರದಲ್ಲಿ ಬಿಜೆಪಿ ನಾಯಕ ಹರ್ಷಾನಂದ್ ಗುತ್ತೇದಾರ್ ಹೇಳಿದ್ದಾರೆ.
ಕಲಬುರಗಿ ನಗರದಲ್ಲಿ SSV TV ಯೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹರ್ಷಾನಂದ್ ಗುತ್ತೇದಾರ್ ಅವರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಪ್ರಾಸಿಕ್ಯೂಷನ್ ಪರ್ಮಿಷನ್’ಗೆ ಸಿದ್ದರಾಮಯ್ಯನವರು ಇಲ್ಲಿಯವರೆಗೂ ಪ್ರಾಮಾಣಿಕರೆಂದು ಹೇಳಿಕೊಂಡು ಬಂದಿದ್ದರು ಆದರೆ ಈಗ ಅವರು ಕೂಡ ಅಕ್ರಮ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ವಿಚಾರವಾಗಿ ಕೂಲಂಕುಶವಾಗಿ ತನಿಖೆಯಾಗಬೇಕು ಆದರೆ ಸಿದ್ದರಾಮಯ್ಯನವರು ತನಿಖೆಯಾಗದೇ ತಾವೇ ತಾವು ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಆದರೆ ಅವರು ನಾವೇನು ಮಾಡಿಲ್ಲ ಇದು ಹಗರಣವೇ ಅಲ್ಲ ಎನ್ನುವುದು ತಪ್ಪು ಎಂದು ಹೇಳಿದ ಅವರು, ನಾಳೆ ಕೆಪಿಸಿಸಿಯು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಮಾತನಾಡಿ ಕಾಂಗ್ರೇಸ್ ನಾಯಕರು ಕುರುಬ ಸಮಾಜದವರಿಗೆ ಮಿಸ್ ಗೈಡ್ ಮಾಡಿ ಪೊಲಿಟಿಕಲಿ ಗೇಮ್ ತೆಗೆದುಕೊಳ್ಳುವ ಸಲುವಾಗಿ ಕುರುಬ ಸಮಾಜದ ಮುಖಂಡರಿಗೆ ಎತ್ತುಕಟ್ಟಿ ಪ್ರತಿಭಟನೆಗೆ ಇಳಿಸುತ್ತಿದ್ದಾರೆ ಆದರೆ ಇದು ತಪ್ಪು ಎಂದು ಹೇಳಿದ್ದಾರೆ





