ರೈತರು ಬೆಳೆಯುವ ಹೆಸರು, ಉದ್ದು ತೊಗರಿ ಸೇರಿ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರ ಆರಂಭಿಸಬೇಕೆಂದು ನವಕರ್ನಾಟಕ ರೈತ ಸಂಘದ ರೈತ ಮುಖಂಡ ದಯಾನಂದ್ ಪಾಟೀಲ್ ಆಗ್ರಹಿಸಿದ್ದಾರೆ.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರೈತರು ಬೆಳೆಯುವ ತೊಗರಿ, ಉದ್ದು, ಹೆಸರು ಸೇರಿದಂತೆ ಎಲ್ಲಾ ಬೆಳೆಗಳಿಗಳಿಗೆ ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ಈಗಿರುವ ಬೆಂಬಲ ಬೆಲೆಯು ಅವೈಜ್ಞಾನಿಕವಾಗಿದ್ದು, ಬೀಜ, ಗೊಬ್ಬರ, ಔಷಧ ಬೆಲೆಗಳು ಗಣನೀಯವಾಗಿ ಪ್ರತಿ ವರ್ಷಕ್ಕೆ ಹೆಚ್ಚಾಗುತ್ತಿವೆ, ಇದರ ಜೊತೆಗೆ ಕೂಲಿ ಕಾರ್ಮಿಕರ ಅಭಾವ ಮತ್ತು ಕೂಲಿ ಹಣ ಹೆಚ್ಚಾಗಿದ್ದು ಲಾಭವಿಲ್ಲದ ಕೃಷಿಯಲ್ಲಿ ಕಾರ್ಮಿಕರ ಸಮಸ್ಯೇ ಕೂಡ ಕಾಡುತ್ತಿದೆ ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಪಂಡಿತರು ಚಿಂತಕರು ರೈತ ಹೋರಾಟಗಾರರನ್ನು ಒಳಗೊಂಡ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಸಮಿತಿ ರಚಿಸಿ ರೈತರು ಬೆಳೆದ ಬೆಳೆಗೆ ತಗಲುವ ಖರ್ಚಿನ ಎರಡು ಪಟ್ಟು ಬೆಂಬಲ ಬೆಲೆ ಹೆಚ್ಚಿಗೆ ಮಾಡಬೇಕು ಎಂದಿದ್ದಾರೆ





