ಲೋಕಕಲ್ಯಾಣ ಹಾಗೂ ಮಾನವ ಸಮೃದ್ಧಿಗಾಗಿ ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ವಿಶ್ವರಾಧ್ಯ ಸಿದ್ಧಸಂಸ್ಥಾನ ಮಠದ ಶ್ರೀ ಗಂಗಾಧರ ಮಹಾಸ್ವಾಮೀಜಿಯವರು ಸುಕ್ಷೇತ್ರ ಗಂವ್ಹಾರ ಗ್ರಾಮದಿಂದ ಸಾವಿರಾರು ಭಕ್ತರ ಜೊತೆ ಪರಂಪರಾ ಪಾದಯಾತ್ರೆ ಪಾಲ್ಗೊಂಡು ಸಂಪನ್ನ ಗೋಳಿಸಿದ್ರು
.ಪಾದಯಾತ್ರೆಯಲ್ಲಿ ಶಾಸಕ ಶರಣಗೌಡ ಕಂದಕೂರು ಅವರು ಭಾಗಿಯಾಗಿ ಶ್ರೀಗಳ ಜೊತೆ ಹೆಜ್ಜೆ ಹಾಕಿದ್ರು.ಪ್ರತಿ ವರ್ಷ ಶ್ರಾವಣ ಮಾಸದ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಗಂವ್ಹಾರದಿಂದ ಮೂರು ದಿನದ ಯಾತ್ರೆಯನ್ನ ಹಮ್ಮಿಕೊಳ್ಳುತ್ತಾರೆ.
ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಸುಕ್ಷೇತ್ರದಲ್ಲಿ ಏರ್ಪಡಿಸಿದ್ದ ಪರಂಪರಾ
ಪಾದಯಾತ್ರೆಯ ಸಮಾರೋಪ ಸಾನಿಧ್ಯ ವಹಿಸಿ
ಆಶೀರ್ವಚನ ನೀಡಿದ್ರು.ವಿವಿಧೆಡೆಯಿಂದ ಆಗಮಿಸಿದ ಭಕ್ತರು ಶ್ರೀಗಳ ದರ್ಶನ ಭಾಗ್ಯ ಪಡೆದು ಪುನಿತರಾದರು.





