ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ ಆವರಣದಲ್ಲಿ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸುಮಾರು 17 ಅರ್ಜಿಗಳು ಬಂದಿದ್ದು ಬಹುತೇಕರು ಮೌಖಿಕ ದೂರುಗಳನ್ನು ಹೊತ್ತು ತಂದಿದ್ದರು. ಪ್ರಚಾರದ ಕೊರತೆಯಿಂದ ಸಾರ್ವಜನಿಕರ ಭಾಗವಹಿಸುವಿಕೆ ಕೊರತೆ ಕಾಣುತಿದ್ದು ಸಭೆಯಲ್ಲಿ ಬರೀ ಅಧಿಕಾರಿಗಳೆ ಹೆಚ್ಚಾಗಿ ಕುಳಿತಿದ್ದು ಕಂಡು ಬಂತು. ಆದ್ರೆ ಬಂದಿದ್ದವರಲ್ಲಿ ಬಹತೇಕರು ಕಂದಾಯ ಜಮೀನುಗಳಿಗೆ ಬಂದಿಸಿದ ದೂರುಗಳನ್ನೆ ಹೊತ್ತು ತಂದಿದ್ದರು