ಭಕ್ತರಿಗೆ ಅನುಕೂಲವಾಗಲೆಂದು ಸ್ವಂತ ಹಣದಲ್ಲಿ ರಸ್ತೆ ಡಾಂಬರೀಕರಣ ಮಾಡಿಸಿದ ಗುತ್ತಿಗೆದಾರ ಸಿದ್ದನಗೌಡ ಪಾಟೀಲ.
ವಿಜಯಪುರ ಜಿಲ್ಲೆ, ತಾಳಿಕೋಟಿ ಪಟ್ಟಣದಲ್ಲಿ ಜುಲೈ 11 ರಿಂದ ನಡೆಯಲಿರುವ ಪಟ್ಟಣದ ಆರಾಧ್ಯ ದೈವ ಶ್ರೀಖಾಸ್ಗತೇಶ್ವರ ಜಾತ್ರೆಗೆ ಬರುವ ಸಾವಿರಾರು ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಪಟ್ಟಣದಲ್ಲಿ ಅಲ್ಲಲ್ಲಿ ಕೆಟ್ಟು ಹೋದ ರಸ್ತೆಗಳನ್ನು ಡಾಂಬರೀಕರಣ ಗೊಳಿಸಿ ಶ್ರೀ ಮಠದ ನಿಸ್ವಾರ್ಥ ಭಕ್ತ ಪಡಗಾನೂರು ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀ ಸಿದ್ದನಗೌಡ ಪಾಟೀಲ್ ಅವರು ಶ್ರೀಮಠದ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅವರ ಈ ನಿಸ್ವಾರ್ಥ ಸೇವೆಗೆ ಶ್ರೀಮಠದ ಆಡಳಿತ ಮಂಡಳಿ ಮುಖ್ಯಸ್ಥ ಶ್ರೀ ಮುರುಗೇಶ ವಿರಕ್ತಮಠ ಕೃತಜ್ಞತೆ ತಿಳಿಸಿದ್ದಾರೆ.





