ಕಲಬುರಗಿ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರಿಂದ ಸುದ್ದಿಗೋಷ್ಟಿ ನಡೆಸಲಾಯಿತು
ಇಂದು ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅಬ್ದುಲ್ ರಹಿಮಾನ ಪಟೇಲ ಅವರು ನಾವು ಹಲವು ವರ್ಷಗಳಿಂದ ಕಾಂಗ್ರೇಸ್ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದೇವೆ, ನಮಗೆ ತಾಲೂಕಿನಲ್ಲಿನ ಸ್ಥಾನಮಾನವನ್ನು ಹೊರತುಪಡಿಸಿ ಬೇರೆಯ ಜಿಲ್ಲಾ ಮಟ್ಟದಲ್ಲಾಗಲಿ, ರಾಜ್ಯಮಟ್ಟದಲ್ಲಾಗಲಿ ಯಾವುದೇ ಸ್ಥಾನವನ್ನು ಕೊಟ್ಟಿಲ್ಲ ಹಾಗಾಗಿ ಜಗದೇವ ಗುತ್ತೇದಾರ ಅವರಿಂದ ತೆರವಾಗುತ್ತಿರುವ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ಕೊಡಬೇಕೆಂದು ಒತ್ತಾಯಿಸಿದರು





