ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಇಂದು ಬಿಜೆಪಿ ಕರ್ನಾಟಕ ಮಾಧ್ಯಮ ಪ್ರಕೋಷ್ಟ ವತಿಯಿಂದ ಸುದ್ದಿಗೋಷ್ಟಿ ನಡೆಸಲಾಯಿತು. ಈ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಾಬುರಾವ ಚವ್ಹಾಣ ಅವರು ವಾಲ್ಮಿಕಿ ನಿಗಮದಲ್ಲಿ ಅಧ್ಯಕ್ಷರಾದ ಚಂದ್ರಶೇಖರ ಅವರು ಆತ್ಮಹತ್ಯೇ ಮಾಡಿಕೊಂಡಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ ಆದರೆ ಈ ಸರ್ಕಾರ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಮಂತ್ರಿಯವರ ಹೆಸರು ಪ್ರಸ್ತಾಪ ಕೂಡ ಆಗಿದೆ 187 ಕೋಟಿ ರೂ ಹಗರಣ ಆದರೂ ಈ ಹಣವೆಲ್ಲ ಆಂದ್ರ ಪ್ರದೇಶಕ್ಕೆ ವರ್ಗಾವಣೆಯಾಗಿದೆ ಆದರೂ ನಾಗೇಂದ್ರ ಅವರು ರಾಜಿನಾಮೆ ತೆಗೆದುಕೊಳ್ಳುತ್ತಿಲ್ಲ ಎಂದರು.





