Home Local News ಮಲ್ಲಿಕಾರ್ಜುನ ಮುತ್ಯಾ ಅವರ ಮೇಲಿನ ಪ್ರಕರಣ ರದ್ದತಿಗಾಗಿ ಪ್ರತಿಭಟನೆ ಇಂದು

ಮಲ್ಲಿಕಾರ್ಜುನ ಮುತ್ಯಾ ಅವರ ಮೇಲಿನ ಪ್ರಕರಣ ರದ್ದತಿಗಾಗಿ ಪ್ರತಿಭಟನೆ ಇಂದು

0
ಮಲ್ಲಿಕಾರ್ಜುನ ಮುತ್ಯಾ ಅವರ ಮೇಲಿನ ಪ್ರಕರಣ ರದ್ದತಿಗಾಗಿ ಪ್ರತಿಭಟನೆ ಇಂದು

ಮಲ್ಲಿಕಾರ್ಜುನ ಮುತ್ಯಾ ಅವರ ಮೇಲಿನ ಪ್ರಕರಣ ರದ್ದತಿಗಾಗಿ ಪ್ರತಿಭಟನೆ ಇಂದು ಚಿತ್ತಾಪುರ:- ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದ ಮಹಲರೋಜಾ ಮಲ್ಲಿಕಾರ್ಜುನ ಮುತ್ಯಾ ಅವರು ಹಿಂದುಳಿದ ವರ್ಗದವರಾಗಿದ್ದು ಇತ್ತಿಚಿನ ದಿನಗಳಲ್ಲಿ ರಾಜ್ಯ ಸೇರಿದಂತೆ ಪರರಾಜ್ಯಗಳಲ್ಲಿಯು ಸಹಿತ ಅಸಂಖ್ಯಾತ ಭಕ್ತಾದಿಗಳನ್ನು ಹೊಂದಿದ್ದಾರೆ,ಅವರ ಏಳ್ಗೆಯನ್ನು ಸಹಿಸದೆ ಕಾಣದ ಕೈಗಳು ಸಂಬಂಧಿಕರ ಮಗುವನ್ನು ತಂದೆ ತಾಯಿಯ ಎದುರಲ್ಲೆ ತನ್ನ ಮಗುವಂತೆ ಮುದ್ದಾಡುತ್ತಿರುವ ವಿಡಿಯೋವನ್ನು ತಿರುತಿ ಮಗುವಿನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ಪೊಕ್ಸೊ ಪ್ರಕರಣ ದಾಖಲಿಸಿರುವುದು ಖಂಡನಿಯವಾಗಿದ್ದು ಮಾರ್ಚ್ 2ನೇ ತಾರಿಕಿನಂದು ಎಲ್ಲಾ ಜಾತಿ ಸಮುದಾಯ ದವರನ್ನೊಳಗೊಂಡು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಸೇವಕ ನಾಗರಾಜ ಆರ್ ಡಿ ಎಕ್ಸ ಅವರು ತಿಳಿಸಿದ್ದಾರೆ ವಾಡಿ ಪಟ್ಟಣದಲ್ಲಿ ನಾಗರಿಕರ ಕಲ್ಯಾಣ ಸಮಿತಿಯ ವತಿಯಂದ ನಡೆದ ಸುದ್ದಿ ಗೋಷ್ಟಿ ಕುರಿತು ಸಮಿತಿಯ ಕಾರ್ಯದರ್ಶಿ ಅಲ್ತಾಪ್ ಸೌದಾಗರ,ಕುಲಿಸಮಾಜದ ತಾಲೂಕ ಉಪಾಧ್ಯಕ್ಷ ನಾಗೇಂದ್ರ ಜೈಗಂಗಾ ಆರ್ಯ ಈಡಿಗ ಸಮಾಜದ ವಾಡಿ ಘಟಕ ಅಧ್ಯಕ್ಷ ಸುನೀಲ ಗುತ್ತೆದಾರ,ನಮ್ಮ ಕರ್ನಾಟಕ ಸೇನೆ ಕಲ್ಯಾಣ ಕರ್ನಾಟಕದ ರೈತ ಘಟಕ ಅದ್ಯಕ್ಷ ಸುರೇಶ್ ಗುತ್ತೆದಾರ,ಕುರುಬ ಸಮಾಜದ ವಾಡಿ ಅಧ್ಯಕ್ಷ ಬಸವರಾಜ ಕೇಶ್ವರ,ಬೋವಿ ಸಮಾಜದ ಲಕ್ಷ್ಮಿಪುರವಾಡಿ ಉಪಾಧ್ಯಕ್ಷ ಸುನೀಲ ಪವಾರ,ಕುರುಬ ಸಮಾಜ ತಾಲ್ಲೂಕು ಉಪಾಧ್ಯಕ್ಷ ಸಿದ್ದು ಪುಜಾರಿ,ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಎಮ್ ಡಿ ಗೌಸ್ ಚಿತ್ತಾಪುರ, ಬಸವರಾಜ ಗುತ್ತೆದಾರ,ತಿಮ್ಮಯ್ಯ ಕಡೆಹಳ್ಳಿ ಸೇರಿದಂತೆ ಅನೇಕರು ಇದ್ದರು. ವರದಿ ಪೃಥ್ವಿ ಸಾಗರ್ ಚಿತ್ತಾಪುರ

LEAVE A REPLY

Please enter your comment!
Please enter your name here

error: Content is protected !!