ಓನಕೆ ಒಬವ್ವ ನಾರಿ ಶಕ್ತಿಯ ಸಂಕೇತ: ಡಾ.ಬಂಧು.ಸಿದ್ದೇಶ್ವರ ಕಲಬುರಗಿ:– ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ವೀರ ಮಹಿಳೆಯರ ತ್ಯಾಗ ಬಲಿದಾನ, ವೀರವೇಶ ಸಾಹಸ ಕಾರ್ಯ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರು ಜೊತೆಗೆ ಚಿತ್ರ ದುರ್ಗ ಕೋಟೇಯ ಸಂರಕ್ಷಣೆಯ, ಹೈದರ್ ಅಲಿ ಸೈನಿಕರ ವಿರುದ್ಧ ತನ್ನ ಆತ್ಮ ಭಲದಿಂದ ಓನಕೆ ಯಿಂದ ಸಂಹರಿಸಿದ ಓಬವ್ವ ಸ್ತ್ರೀ ಕುಲಕೋಟೆಯ ನಾರಿ ಶಕ್ತಿಯ ಸಂಕೇತವಾಗಿದಾರೆಂದು ಡಾ.ಕೆ.ಎಸ.ಬಂಧು.ಸಿದ್ದೇಶ್ವರ ರವರರು ವಿದ್ಯಾರ್ಥಿಗಳಿಗೆ ಕರೆನೀಡಿದರು. ಅವರು ದೇವಿಂದ್ರಪ್ಪ ಜಿಸಿ ಸಂಗೀತ ಸಾಹಿತ್ಯ ಕಲಾ ಸಂಸ್ಥೆ ಹಾಗೂ ಪ್ರಿಯದರ್ಶಿನಿ ಕನ್ಯಾ ಪ್ರೌಢಶಾಲೆ ಸಂಯುಕ್ತಾಕ್ಷರದಲ್ಲಿ ಇಂದು ವೀರ ವನಿತೆ ಒಬ್ಬವನ ಜಯಂತಿ ಕಾರ್ಯಕ್ರಮವನ್ನು ಕೆಪಿಈಎಸ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟಕರಾಗಿ ಹಿರಿಯ ಸಾಹಿತಿ ಡಾ. ಕೆ ಎಸ್. ಬಂಧು.ಸಿದ್ದೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಡಾ .ಸುನಿಲ್ ಕುಮಾರ್ ಒಂಟಿ ನ್ಯಾಯವಾದಿಗಳು ಹಾಗೂ ಪ್ರಗತಿಪರ ಚಿಂತಕರು ಆಗಮಿಸಿ.ಓಬವ್ವನ ಆದರ್ಶ, ನಡೆ ನುಡಿಯ ಜೀವನದಲ್ಲಿ ಅಳವಡಿಸಿಕೊಳ್ಳಿರೆಂದರು. ಅತಿಥಿಗಳಾಗಿ ಸಿಂಧೂಮತಿ ಬೋಸ್ಲೆ ಹಾಗು ಚಂದ್ರಶೇಖರ್ ಮುಖ್ಯ ಗುರುಗಳು ಪ್ರಿಯದರ್ಶಿನಿ ಕನ್ಯ ಪ್ರೌಢಶಾಲೆಯ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು .ಮೊದಲಿಗೆ ಸಿದ್ಧಾರ್ಥ ಡಿ , ಚಿನ್ನ ಇದ್ಲಾಯಿ ದೇವಿಂದ್ರಪ್ಪ ಜಿಸಿ ಸಂಗೀತ ಸಾಹಿತ್ಯ ಕಲಾ ಸಂಸ್ಥೆ ಅವರು ಅಧ್ಯಕ್ಷರು ಪ್ರಾಸ್ತಾವಿಕ ಭಾಷಣ ಮಾಡಿದ ಓಬವ್ವ ಜೀವನ ಚರಿತ್ರೆಯ ಮಕ್ಕಳಿಗೆ ಬೋಧಿಸಿದರು. ಶ್ರೀಧರ್ ಹೊಸಮನಿ ಸ್ವಾಗತ ಕೋರಿದರು ವಿದ್ಯಾಮೂಲಕೆಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು .ಕನ್ನಡ ಶಿಕ್ಷಕರ ವಂದನಾಪರಣೆ ಗೈದರು
ಓನಕೆ ಒಬವ್ವ ನಾರಿ ಶಕ್ತಿಯ ಸಂಕೇತ: ಡಾ.ಬಂಧು.ಸಿದ್ದೇಶ್ವರ
ಓನಕೆ ಒಬವ್ವ ನಾರಿ ಶಕ್ತಿಯ ಸಂಕೇತ: ಡಾ.ಬಂಧು.ಸಿದ್ದೇಶ್ವರ





