ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ, ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮವನ್ನು ನಡೆಸಲಾಯಿತು.ಜಿಲ್ಲಾ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ಏಕತಾ ವಾಕ್ ಥಾನ್ ನಡೆಸಲಾಯಿತು.ಏಕತಾ ನಡಿಗೆಗೆ ಯಾದಗಿರಿ ಡಿಸಿ ಹರ್ಷಲ್ ಭೋಯರ್, ಎಸ್ಪಿ ಪೃಥ್ವಿಕ ಶಂಕರ್ ಅವರು ಚಾಲನೆ ನೀಡಿದರು.ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಮುಂಭಾಗದ ರಸ್ತೆ ಮೂಲಕ ವಿವಿಧ ಮಾರ್ಗದ ಮೂಲಕ ಲುಂಬಿನಿ ಗಾರ್ಡನ್ ವರಗೆ ಏಕತಾ ನಡಿಗೆ ನಡೆಸಲಾಯಿತು. ವಾಕ್ ಥಾನ್ ನಲ್ಲಿ ಯಾದಗಿರಿ ಜಿಪಂ ಸಿಇಓ ಲವೀಶದ ಓರಡಿಯಾ ,ಪೊಲೀಸ್ ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿದರು.ಈ ವೇಳೆ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಮಾತನಾಡಿ, ಏಕತಾ ನಡಿಗೆ ಬಗ್ಗೆ ತಿಳಿಸಿದರು
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ, ರಾಷ್ಟ್ರೀಯ ಏಕತಾ ನಡಿಗೆ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ, ರಾಷ್ಟ್ರೀಯ ಏಕತಾ ನಡಿಗೆ





