Google search engine
ಮನೆUncategorizedಪ್ರಿಯಾಂಕ ಖರ್ಗೆ ರಾಜಕೀಯವಾಗಿ ದಲಿತ ಸಂಘಟನೆಗಳು ಬಳಸಿಕೊಳ್ಳುತ್ತಿದೆ ; ವಿಜಯಕುಮಾರ ಆಡಕಿ ಆಕ್ರೋಶ

ಪ್ರಿಯಾಂಕ ಖರ್ಗೆ ರಾಜಕೀಯವಾಗಿ ದಲಿತ ಸಂಘಟನೆಗಳು ಬಳಸಿಕೊಳ್ಳುತ್ತಿದೆ ; ವಿಜಯಕುಮಾರ ಆಡಕಿ ಆಕ್ರೋಶ

ಪ್ರಿಯಾಂಕ ಖರ್ಗೆ ರಾಜಕೀಯವಾಗಿ ದಲಿತ ಸಂಘಟನೆಗಳು ಬಳಸಿಕೊಳ್ಳುತ್ತಿದೆ ; ವಿಜಯಕುಮಾರ ಆಡಕಿ ಆಕ್ರೋಶ

ಸಚಿವ ಪ್ರಿಯಾಂಕ ಖರ್ಗೆ ರಾಜಕೀಯವಾಗಿ ದಲಿತ ಸಂಘಟನೆಗಳು ಬಳಸಿಕೊಳ್ಳುತ್ತಿದೆ ಎಂದು ಜಿಲ್ಲಾ ಮಾದಿಗ ಸಮಾಜದ ಮಾಜಿ ಅದ್ಯಕ್ಷ ವಿಜಯಕುಮಾರ ಆಡಕಿ ಆಕ್ರೋಶ ವ್ಯಕ್ತಪಡಿಸಿದರು ಸೇಡಂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ರಾಜಕೀಯವಾಗಿ ದಲಿತ ಸಂಘಟನೆಗಳನ್ನು ಬಳಸಿಕೊಳ್ಳುತ್ತಿದೆ ಇದು ಖಂಡನೀಯ ಎಂದು ಜಿಲ್ಲಾ ಮಾದಿಗ ಸಮಾಜದ ಮಾಜಿ ಅದ್ಯಕ್ಷ ವಿಜಯಕುಮಾರ ಆಡಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಪಟ್ಟಣದ ಪತ್ರಿಕಾ ಭವನದಲ್ಲಿ ಮಾತನಾಡಿ ಸಚಿವ ಪ್ರಿಯಾಂಕ ಖರ್ಗೆ ಅವರು ಅಭಿವೃದ್ಧಿ ಯನ್ನು ಮರೆತು ಕೇವಲ ಆರ್,ಎಸ್,ಎಸ್ ಕುರಿತು ಮತ್ತು ಕಾಂಗ್ರಸ್ ಪಕ್ಷಕ್ಕೆ ನಿಷ್ಠೆ ತೋರಿಸುವದಕ್ಕಾಗಿ ಅನಗತ್ಯವಾಗಿ ಹೇಳಿಕೆಗಳು ನೀಡುತ್ತಿದ್ದಾರೆ ಕಲಬುರ್ಗಿ ಜಿಲ್ಲೆ ಶೈಕ್ಷಣಿಕ ವಾಗಿ ಕೊನೆಯ ಸ್ಥಾನ ತಲುಪಿದೆ ಅತಿವೃಷ್ಟಿ ಯಿಂದ ಬೆಳೆಗಳು ಹಾಳಾಗಿದ್ದು ಇದುವೆರಗೂ ಪರಿಹಾರ ನೀಡಿಲ್ಲ ಅಭಿವೃದ್ಧಿ ಮರೆತು ಕೇವಲ ಆರೆಸ್ಸೆಸ್ ಕುರಿತು ಹೇಳಿಕೆಗಳು ನೀಡುತ್ತಿದ್ದಾರೆ ಚಿತ್ತಾಪೂರ ತಾಲೂಕಿನಲ್ಲಿ ಅನೇಕರು ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ.ಪ್ರಿಯಾಂಕ ಖರ್ಗೆ ಅವರು ಯಾವುದೇ ದಲಿತ ಚಳುವಳಿಯಲ್ಲಿ ಭಾಗವಹಿಸಿಲ್ಲ ಆರೆಸ್ಸಸ್ ನೂರಾರು ವರ್ಷಗಳ ಇತಿಹಾಸ ಹೊಂದಿದೆ ಪಥ ಸಂಚಲನದಲ್ಲಿ ಇದುವರೆಗೆ ಯಾವುದೇ ಅಹಿತರ ಘಟನೆಗಳು ನಡೆದಿಲ್ಲ ಜಿಲ್ಲಾಧಿಕಾರಿಗಳು ನಡೆಸಿದ ಶಾಂತಿ ಸಭೆಯಲ್ಲಿ ಜಿಲ್ಲಾ ಮಾಜಿ ಅದ್ಯಕ್ಷ ದಲಿತ ಮುಖಂಡ ಅಂಬಾರಾಯ ಅಷ್ಟಗಿ ಮೇಲೆ ಪ್ರಿಯಾಂಕ ಖರ್ಗೆ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದು ಖಂಡನೀಯ ದಲಿತರು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದರೆ ತಪ್ಪೇನಿದೆ ಎಂದು ವಿಜಯಕುಮಾರ ಆಡಕಿ ಪ್ರಶ್ನಿಸಿದ್ದಾರೆ ಚಿತ್ತಾಪೂರದಲ್ಲಿ ಪಥ ಸಂಚಲನಕ್ಕೆ ಅಡ್ಡಿಪಡಿಸುವದು ಸರಿಯಲ್ಲ ಸರಕಾರ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅದ್ಯಕ್ಷ ಮಲ್ಕಪ್ಪ ಕೊಡದೂರ, ಪುರಸಭೆ ಸದಸ್ಯ ಬಸಣ್ಣ ರೆನ್ನೆಟ್ಲಾ,ಮಾದಿಗ ಸಮಾಜದ ರಾಮು ಕಣೀಕಲ್, ಭೋವಿ ಸಮಾಜದ ಮುಖಂಡ ಅಳ್ಳೆಪ್ಪ ಪೂಜಾರಿ,ಬಂಜಾರ ಸಮಾಜದ ಜೈಪ್ರಕಾಶ ಊಡಗಿ, ವಾಲ್ಮಿಕಿ ಸಮಾಜದ ರವಿ ನಾಯಕ, ಛಲವಾದಿ ಸಮಾಜದ ಮಹಾವೀರ ಅಳ್ಳೊಳ್ಳಿ ಇದ್ದರು ಶರಣಪ್ಪ ಎಳ್ಳಿ ssvtv news ಸೇಡಂ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!