ಆಳಂದ: ನಾನು ಮತ ಚೋರಿ ಪ್ರಯತ್ನ ಮಾಡಿಲ್ಲ: ಗುತ್ತೆದಾರ್ ರಿಯ್ಯಾಕ್ಷನ್ ಆಳಂದದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು ಯಾವುದೇ ರೀತಿಯ ಮತದಾನದಲ್ಲಿ ಅಕ್ರಮ ನಡೆಸಿಲ್ಲ ಎಂದು ಹೇಳಿದ್ದಾರೆ. ತಮ್ಮ ಮನೆಯ ಮೇಲೆ ನಡೆದ ಎಸ್ಐಟಿ ದಾಳಿ ರಾಜಕೀಯ ಪ್ರೇರಿತವಾಗಿದ್ದು, ತಾವು ಯಾವುದೇ ಸಾಕ್ಷಿ ನಾಶಪಡಿಸಲು ಯತ್ನಿಸಿಲ್ಲ ಎಂದು ಅವರು ಕಲಬುರಗಿಯಲ್ಲಿ ತಿಳಿಸಿದರು. ಯಾವುದೇ ತನಿಖೆ ಎದುರಿಸಲು ತಾವು ಸಿದ್ಧವಿರುವುದಾಗಿ, ತಮ್ಮ ಮನೆಯಲ್ಲಿ ಏನು ಬೇಕಾದರೂ ಪರಿಶೀಲನೆ ನಡೆಸಬಹುದು ಅಥವಾ ತಮ್ಮನ್ನು ಬಂಧಿಸಬಹುದು ಎಂದೂ ಅವರು ಹೇಳಿದರು