ಕಲಬುರಗಿ: ಶಖಾಪುರ ಗ್ರಾಮದಲ್ಲಿ ಮೆಳ್ಳೆಸಿದ ರೊಟ್ಟಿ ಜಾತ್ರೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಶಖಾಪುರ ಗ್ರಾಮದಲ್ಲಿರೋ ಶ್ರೀ ವಿಶ್ವಾರಾಧ್ಯ ತಪೋವನದಲ್ಲಿ ಪ್ರತಿ ವರ್ಷ ಲಿಂ. ಶ್ರೀ ಸಿದ್ದರಾಮ ಶಿವಯೋಗಿಗಳ 75ನೇ ಪುಣ್ಯಾರಾಧನೆ ಹಿನ್ನಲೆಯಲ್ಲಿ ರೊಟ್ಟಿ ಜಾತ್ರೆ ನಡೆಯುತ್ತದೆ. ಪ್ರಸಾದಕ್ಕೆ 35 ಕ್ವಿಂಟಾಲ್ ಜೋಳ, 25 ಕ್ವಿಂಟಾಲ್ ಸಜ್ಜೆ ಬಳಸಿ ರೊಟ್ಟಿ ತಯಾರಿಕೆ ಮಾಡಲಾಗಿತ್ತು ಮತ್ತು 15 ಕ್ವಿಂಟಾಲ್ ನಾನಾ ಧಾನ್ಯ ಹಾಗೂ ತರಕಾರಿಗಳಿಂದ ಬಜ್ಜಿ ಪಲ್ಯ ಮಾಡಲಾಗಿತ್ತು. 10 ಸಾವಿರಕ್ಕೂ ಹೆಚ್ಚು ಭಕ್ತರು ಮಠದಲ್ಲಿ ಜೋಳದ ರೊಟ್ಟಿ, ಬಜ್ಜಿ ಪಲ್ಯ ಸವಿದರು. ವಾರದಿಂದಲೇ ಮಠದ ಪ್ರಾಂಗಣದಲ್ಲಿ ಮಹಿಳೆಯರು ರೊಟ್ಟಿ ತಯ್ಯಾರು ಮಾಡುತ್ತಿದ್ದರು. ಜಾತಿ ಭೇದ ಮರೆತು ಪೀಠಾಧಿಪತಿ ಶ್ರೀ ಸಿದ್ದರಾಮ ಶಿವಾಚಾರ್ಯರ ನೇತೃತ್ವದಲ್ಲಿ ಪಂಕ್ತಿ ಭೋಜನೆ ನಡೆಯಿತು